Wednesday, June 15, 2011

ಹೀಗಿದ್ದರೆ ಚನ್ನ?


ಸಾಮಾನ್ಯವಾಗಿ ಟೀವಿಗಳಲ್ಲಿ ಪ್ರಸಾರ ಆಗೋ ಸಂದರ್ಶನಗಳನ್ನೂ ನೋಡುತ್ತಿರುತ್ತೇವೆ.ಅವುಗಳಲ್ಲಿ ಕೆಲವು ಖುಷಿ ಕೊಡುತ್ತೆ ,ಒಂದಷ್ಟು ಮುಗಿದರೆ ಸಾಕಪ್ಪ ಅಂತ ಅನ್ನಿಸುತ್ತೆ.ಸಂದರ್ಶನಗಳಲ್ಲಿ ಹೆಚ್ಚು ಇಂಪ್ರೆಸ್ ಮಾಡಿದ್ದೂ ಕರಣ್ ಥಾಪರ್ ಒಬ್ಬರು.ಬಿಡಿ ಅವರ ಸಂದರ್ಶನ ಅಥವಾ ಸರಳ ಮಾತುಕಥೆಎಲ್ಲರಿಗು ಅರ್ಥ ಆಗುವಂತಹುದಲ್ಲ ಕನ್ನಡ ಚಾನಲ್ ಗಳು ಆರಂಭ ಆದದ್ದೇ ಬಂತು, ಸಂದರ್ಶನದ ರುಚಿ ಸಾಮಾನ್ಯನಿಗೆ ಅದರಲ್ಲೂ ಹೆಣ್ಣುಮಕ್ಕಳಿಗೆ ಇದರ ಖುಷಿ ಸಿಕ್ತು .ಕರಣ್ ಥಾಪರ್ ಥರ ಕನ್ನಡದಲ್ಲಿ ಮಾತಿಗೆ ಅವಕಾಶಕೊಡದೆ ಇದ್ದವರಲ್ಲಿ ,ಅತೀ ಅತೀ ಎಂಬ ಅಗ್ಗಳಿಕೆ ಪಡೆದವರು ತೇಜಸ್ವಿನಿ ಶ್ರೀ ರಮೇಶ್. ಉದಯವಾಹಿನಿಯಲ್ಲಿ ಆಕೆ ಸಂದರ್ಶನಕ್ಕೆ ಬೆಚ್ಚಿ ಬೆದರದೆ ಇರದವರು ಯಾರು ಇಲ್ಲ ಅಂತ ಅನ್ನಬಹುದು.ಆಕೆಯ ವಾಗ್ಧಳಿಗೆ ವೀಕ್ಷಕನ ಕಥೆ ಬ್ಯಾಡ ಪಾಪ!! ಆಮೇಲೆ ಬಂದಂತಹವರು ದೀಪಕ್ ತಿಮ್ಮಯ್ಯ ಎನ್ನುವ ಸಂದರ್ಶಕ.ಆತನ ಸಂದರ್ಶನದ ಶೈಲಿ ತುಂಬಾ ಚೆನ್ನಾಗಿರುತ್ತದೆ ನಿಜ.ಆದರೆ ಆತ ಕನ್ನಡದ ಕರಣ್ ಥಾಪರ್,ಜಪ್ಪಯ್ಯ ಅಂದ್ರು ಮಾತಡೋನಿಗೆ ಹೆಚ್ಚು ಅವಕಾಶ ಕೊಡೋಕ್ಕೆ ಹೋಗಲ್ಲ.'ನೀವ್ ಯಾಕ್ ಹೀಗ್ ಮಾಡಿದ್ರಿ? ಇದ್ ತಪ್ಪಲ್ವಾ' ಅಂತ ಕೇಳುವ ಉತ್ಸಾಹದಲ್ಲೀ ಇರುತ್ತಾರೆ.ಇದು ವೀಕ್ಷಕನಿಗೆ ಹೆಚ್ಚು ಬೋರ್ ಉಂಟು ಮಾಡುತ್ತದೆ. ಸಂದರ್ಶನಕ್ಕೆ ಮಜಾ ತಂದವರು ಸುವರ್ಣ-ಶಶಿಧರ್ ಭಟ್ , ಈಟಿವಿ ಸದಾಶಿವ ಶೆಣೈ.ಸುವರ್ಣ ನ್ಯೂಸ್ ಚಾನಲ್ ನಲ್ಲಿ ಪ್ರಸಾರ ಆಗುವ ವಾಕ್ಪಥ -ಸರಳ,ಸುಗಮ,ಆಹ್ಲಾದ ಮಾತಿನ ಪಥ ..........ವಿಶ್ವೇಶ್ವರ ಭಟ್ ಮಾತಿನ ಶೈಲಿ ಜನಕ್ಕೆ ಖುಷಿ ಹಾಗು ಮಜಾ ಕೊಡುತ್ತೆ.ನಡೆದಾಡುತ್ತ ಮಾತಿನ ದಾರಿ ಸುಗಮ ಮಾಡುವ ಭಟ್ಟರು ತಮ್ಮ ಗಮನ ವೀಕ್ಷಕರ ಆಸಕ್ತಿ ಮೇಲೆ ನೆಟ್ಟಿರುತ್ತಾರೆ ಅನ್ನೋದು ಇಲ್ಲಿ ಬಹಳ ಮುಖ್ಯ.ಇಷ್ಟು ಸಂದರ್ಶನ ಮಾಡಿದ್ದರು ಅವರಿಗೂ ಇನ್ನು ಬೇಸರ ಹುಟ್ಟಿಲ್ಲ,ಜನರಿಗೂ ಆಸಕ್ತಿ ಕಡಿಮೆ ಆಗಿಲ್ಲ. ಜನಕ್ಕೆ ಯಾವುದೇ ಕಾರ್ಯಕ್ರಮ ಪದೇಪದೆ ನೋಡುವ ಖುಷಿ ಹುಟ್ಟಿಸುವ ಛಾತಿ ಇರೋದು ಆ ಕಾರ್ಯಕ್ರಮದ ನಿರೂಪಕನಿಗೆ.ಆತ ಈ ವಿಷ್ಯದಲ್ಲಿ ಸದಾ ಎಚ್ಚರ ಆಗಿರಬೇಕು.ಅಂದಂಗೆ ವಿಶ್ವೇಶ್ವರ ಭಟ್ರು ಆ ಪರಿ ನಡಿತಾರಲ್ಲ ಅವ್ರಿಗೆ ಕಾಲು ನೋಯೋದಿಲ್ವಾ ? ಈಗ ನನ್ನನ್ನು ಕಾಡ್ತಾಯಿರೋ ಪ್ರೆಶ್ನೆ ಇದೆ.ನೀವೇನು ಅಂತಿರಿ ಸರ್.

1 comments:


Anonymous said...
avru belige hothu jogging madode ilvanthe. yakendre vaarkkondsala stadiam suttha round hakbekalla. adke beda ankondidare. adke eno avra deha dinadinakke devalop agtane ide. swalp thellagadre modlintarane smart agbodenoooo... idu nan riquestu saar.

No comments:

Post a Comment