Friday, October 22, 2010

ಪುಟ್ಟ ಸಂತೋಷ :-)

ನಿಮಗೆ ಖಿನ್ನತೆ ಕಾಡೋ ದಿಲ್ವೆ  ? ಪ್ರಶ್ನೆ ಎಸೆದಿದ್ರು ಆತ್ಮೀಯ ಗೆಳೆಯರೊಬ್ಬರು. ಸಂತಸ ಸಂಕಟ ಬದುಕಿನ ಎರಡು ಮುಖ,ಅದು ಯಾವ ರೀತಿಯಲ್ಲಿ ಬೇಕಾದರೂ ಪ್ರಕಟ ಆಗ ಬಹುದು.ಖಿನ್ನತೆಯ ಮಟ್ಟದಲ್ಲಿ ಅಲ್ಪ ಲೋಪ ಇರ ಬಹುದೇನೋ ಗೊತ್ತಿಲ್ಲ ಆದರೆ ಖಿನ್ನತೆಯ ಪ್ರಭಾವ ಬದುಕಿರುವ ಎಲ್ಲಾ ಜೀವ ಕೋಟಿ  ಮೇಲೂ  ಇದ್ದೆ ಇರುತ್ತದೆ. ಖಿನ್ನತೆಯನ್ನು ದೂರ ಮಾಡಿಕೊಳ್ಳಲು ಮುಖ್ಯವಾಗಿ ನಾವು ಸತ್ಯವನ್ನು ಒಪ್ಪಿ ಕೊಳ್ಳ ಬೇಕು. ನಮ್ಮ ಬದುಕಿಗೆ ಅಂಟಿಕೊಂಡಿರುವ, ನಮ್ಮದಾಗಿರುವ ಕೆಲವು ರಹಸ್ಯಗಳನ್ನು ನಮ್ಮ  ಆತ್ಮ ಸಾಕ್ಷಿಯ ಮುಂದೆ ಇಟ್ಟು , ಹೌದಲ್ವ , ಇಲ್ಲ ಹೀಗಲ್ವ ಎನ್ನುವ ಪ್ರಶ್ನೆಗಳನ್ನು ಹಾಕಿಕೊಂಡು ಮಾತನಾಡಿದಾಗ ಮಾತ್ರ ಖಿನ್ನತೆಯ ದುಷ್ಟ ಸುಳಿಯಿಂದ ಹೊರ ಬರಬಹುದು. ಅದು ಎಂದಿಗೂ ಸಾಧ್ಯ ಇಲ್ಲದ ಮಾತು. 
ವರ್ಷಾನುಗಟ್ಟಲೆ ಪ್ರೀತಿಸಿ ಮೋಸ ಮಾಡಿ ನಾನು ಮಾಡಿದ್ದೆ ಸರಿ ಎನ್ನುವವರು, ಎಷ್ಟೇ ಪ್ರೀತಿ ಪ್ರೇಮ, ಜೀವನದ ಸತ್ಯ ದರ್ಶನದ ಬಗ್ಗೆ  ಬರೆದರೂ  ಪ್ರತಿದಿನ ರಾತ್ರಿ ಮುದರಿ ಮಲಗುತ್ತಾರೆ. ಆರಂಭಿಕ ಹಂತದಲ್ಲಿ  ಅವರಿಗೆ ಅಂತಹ ಯಾವುದೇ ಸಂಗತಿ ಕಾಡದೆ ಇರಬಹುದು ಆದ್ರೆ ಕಾಡುವ ನೆನಪುಗಳು ಸದಾ ಎಲ್ಲೋ ಕುಳಿತೆ ಇರುತ್ತದೆ.
ಮಾತೆತ್ತಿದರೆ ಕೆಲವರು ಧರ್ಮ ಆಚಾರ,ಒಳ್ಳೆಯತನ ಎಂದು ಹೇಳ್ತಾನೆ ಇರ್ತಾರೆ. ನನಗೆ ಬೇಜಾರಾಗೋದು ಅವರು ಹಾಗೆ ಹೇಳುವುದರಿಂದ ಅಲ್ಲ ಅವರ ಬಗ್ಗೆ ಸಮಾಜದ ಬಹುಪಾಲು ಜನರು ಬೇರೆಯದೇ ವಿಷಯ ಹೇಳಿದಾಗ. ಆ ಮೂಲಕ ಎಲ್ಲೋ ಮನುಷ್ಯ ,ಮನಸ್ಸು, ಬಾಂಧವ್ಯ ಅಂದ್ರೆ ಇಷ್ಟೇನಾ ಎನ್ನುವ ಪ್ರಶ್ನೆ ಕಾಡುತ್ತೆ. 
ಕೆಲವರಂತೂ ತಿಳಿದಷ್ಟು ಸರಳವಲ್ಲ  ಅನ್ನುವ ಸಂಗತಿ ನನಗೆ   ಭಯಂಕರ ಆಶ್ಚರ್ಯ  ಹುಟ್ಟಿಸುತ್ತೆ.ಅಂತಹ  ಸತ್ಯ ಗೊತ್ತಾದಾಗ  ನನ್ನಲ್ಲಿ ಖಿನ್ನತೆ ಉಂಟಾಗುತ್ತದೆ.ಸಿಕ್ಕಾಪಟ್ಟೆ ಭಯ ಆಗುತ್ತೆ ! ಜೀವದ್ದಲ್ಲ, ಜೀವಗಳ ಸೋಗಲಾಡಿ ವೈಖರಿಗೆ ಅಷ್ಟೆ ! 
ಅಷ್ಟು ದಿನಗಳಿಂದ ಫ್ಯಾನ್ ಆಗಿದ್ದವಳಿಗೆ ಆ  ವ್ಯಕ್ತಿಯು ಮರ್ಯಾದೆಗೆ ಲಾಯಕ್ಕೆ ಇಲ್ಲ ಎಂದು ಗೊತ್ತಾದಾಗ ದುಃಖ ಉಕ್ಕುತ್ತೆ. ನನಗೆ ಯಾರೂ ಸ್ನೇಹಿತರಿಲ್ಲ, ನನಗೆ ಯಾರ ನೆನಪು ಇರಲ್ಲ ಎಂದು ಸುಳ್ಳು ಮಾತುಗಳನ್ನು ಹೇಳುವವರ ಬಗ್ಗೆ  ಯಾವ ರೀತಿ ಪ್ರತಿಕ್ರಿಯಿಸ ಬೇಕು ತಿಳಿಯದ ಸ್ಥಿತಿ ! ಇವೆಲ್ಲವೂ ನೆನಪಿಗೆ ಬಂದ್ರೆ ಖಿನ್ನತೆ ಉಂಟಾಗುತ್ತದೆ. ಆದರೆ ಅದು ಹೆಚ್ಚು ಪ್ರಭಾವ ಬೀರಲು ನಾನು ಅವಕಾಶ ಕೊಡೋದೇ ಇಲ್ಲ , ಅದರ ಬಾಲ ಕತ್ತರಿಸಿ ಬಿಸಾಡ್ತೀನಿ. ದುಃಖ ಇರುವ ಕಡೆಯಲ್ಲೂ ಎಲ್ಲೋ ಒಂದು ಪುಟ್ಟ ಸಂತೋಷ ಅಡಗಿ ಕೂತಿರುತ್ತೆ, ಅದನ್ನು ಎಳೆದು ಅದರ ಸ್ನೇಹ ಮಾಡಿ ಕೊಳ್ತೀನಿ ,ಆಗ ನನ್ನ ಗಮನ ಅದರತ್ತ ತಿರುಗುತ್ತದೆ. ಆಗ ಅದರ ವಿಸ್ತಾರ ಹೆಚ್ಚು ಮಾಡಿ ಕೊಳ್ತೀನಿ, ಆಗ ಖಿನ್ನತೆ ನಿಶ್ಶಕ್ತ ವಾಗುತ್ತಾ ಬರುತ್ತದೆ. ಆ ಸಣ್ಣ  ಪ್ರಾಂಜಲ ಸಂತೋಷ  prabala ಆಗ್ತಾ ಹೋಗುತ್ತೆ... ಹೀಗೆ ಬದುಕನ್ನು ನನಗಿಷ್ಟ ಬಂದಂತೆ ಬದಲಾಯಿಸಿ ಕೊಳ್ಳಲು ಸದಾ ಪ್ರಯತ್ನಿಸುತ್ತೇನೆ. ಸದಾ ಆ ಕೆಲಸದಲ್ಲಿ ನಿರತ ಆಗಿರುವುದರಿಂದ ಖಿನ್ನತೆ ಉಹುಂ :-)