Friday, February 27, 2009

ಬ್ಯಾನರ್

ನನಗೆ ಮೊದಲಿಂದಲೂ ಈ ಬ್ಯಾನರ್ ಗಳನ್ನು ಓದುವ ಅಭ್ಯಾಸ.ಕೆಲವು ಬಾರಿ ನೋಡುತ್ತಾ ಸಮಯ ಕಲಿಯುವ ಚಟ.ಇತ್ತೀಚೆಗೆ ನಗರದಲ್ಲಿ ಹೆಚ್ಚು ವಿಜೃಂಭಿಸಿದ್ದು ಮಾನ್ಯ ಸಿ.ಎಂ.ಯಡಿಯುರಪ್ಪನವರದು..!ಟ್ವೆಂಟಿ -20 ಮ್ಯಾಚನ್ನು ಕುಮಾರಣ್ಣಆತ ಜ್ವತೆ ಆಡುವಾಗ ಸದಾ ಅವರನ್ನು ಆಹ್ವಾನಿಸುತ್ತಾ ಇದ್ದುದು ಮಾತುಕತೆಗೆ.ಕುಂತ್ಕೊಂಡು ಮಾತಾಡೋಣ ಬನ್ನಿ ಕುಮಾರ್ ಸ್ವಾಮಿ ಅವ್ರೆ ಅಂತ ಕರದದ್ದೇ ಬಂತು,ಅವ್ರು ಕೂರಲಿಲ್ಲ,ಆ ಸರ್ಕಾರ ನಿಲ್ಲಲಿಲ್ಲ.ಆಮೇಲೆ ಯಡಿಯೂರಪ್ಪ ಸಿ.ಎಂ.ಆದಮೇಲೆ ಕೂರೋಕೆ ಹೋಗಲಿಲ್ಲ.ಎಲ್ಲ ಬ್ಯಾನೆರ್ಗಳಲ್ಲು ಅವರು ನಡೆಯುವ ಚಿತ್ರ! ಪ್ರಾಯಶ: ಅವರಿಗೆ ಕುಳಿತು ಕೊಳ್ಳುವ ವಾಸ್ತು ಸರಿಯಾಗಿ ಕೆಲಸ ಮಾಡಲಿಲ್ಲ ಅಂತ ಕಾಣುತ್ತೆ..!ಹಿಂದೆ ಈ ಬ್ಯಾನೆರ್ಗಳು ಹೆಚ್ಚಾಗಿ ರಾಮನ ಬಗ್ಗೆ ಗಮನ ಇತ್ತು ಕೊಂಡಿದ್ದವು.ಅದು ಒಪ್ಪವಾಗಿ ರಾಮ ಭಕ್ತ ಮಂಡಳಿ,ಶ್ರೀ ರಾಮ ಸೇವಾ ಮಂಡಳಿ .. ಹೀಗೆ ಪೋಸ್ಟರ್ ,ಬ್ಯಾನೆರ್ಗಳು ತೃಪ್ತಿ ಯಿಂದ ಇದ್ದವು ..! ಆಮೇಲೆ ನಾನು ಗಮನಿಸಿದಂಗೆ ರಾಮ ಮಿತ್ರ ಮಂಡಳಿ,ಗಣೇಶ ಗೆಳೆಯರ ಬಳಗ,ದ.ರಾ. ಬೇಂದ್ರೆ ಸ್ನೇಹಿತರ ಬಳಗ ...!ಹೀಗೆ ದೇವರು,ಕವಿ,ಲೇಖಕರ ಮಿತ್ರರ ಬಳಗ ಜಗತ್ತಿಗೆ ಕಾಣಿಸಲು ಸುರು ಆಯ್ತು.ಆ ಪದ್ಧತಿ ಈಗಲೂ ಇದೆ..! ಕಳೆದ ಬಾರಿ ನಡೆದ ಚುನಾವಣೆಗೂ ಮುನ್ನ ಅನೇಕ ರಾಜಕೀಯ ಪಕ್ಷಗಳ ನಾಯಕರು ದಿಗ್ಗನೆದ್ದು! ತಮ್ಮ ವದನಾರವಿಂದದ ಪೋಸ್ಟರ್ ಹಾಗು ಬ್ಯಾನ್ಎಲ್ಲ ಕಡೆ ಅಂಟಿಸಿ,ಇವರು ಎನ್ನುವುದನ್ನು ವರ್ಲ್ಡ್ ಫೇಮಸ್ ಮಾಡಿದ ರಮ್ಯಚೈತ್ರ ಕಾಲ. ನನ್ನ ಮನೆಯ ಬಳಿ ಓರ್ವ ರಾಜಕೀಯ ಮರಿ ನಾಯಕ ಚುನಾವಣೆಗೆ ವರ್ಷ ಇದೆ ಅಂತ ಅನ್ನುವಾಗ ತನ್ನ ಮುಚಿತ್ರದ ಪೋಸ್ಟರ್ ಎಲ್ಲಾ ಕಡೆ ಹಾಕೋಕೆ ಆರಂಭಿಸಿದ.ಭೀಮನ ಅಮಾವಾಸ್ಯೆಯಲ್ಲಿ ಶಿವನ ಪೂಜೆ ಮಾಡಿದಂತೆ,ಗಣೇಶನ ಹಬ್ಬದಲ್ಲಿ ಗಣೇಶ ಪೂಜೆ,ರಂಜಾನ್ ಕಾಲದಲ್ಲಿ ಆ ವೇಷ,ಕ್ರಿಸ್ಮಸ್ಗೆ ಸಂತ ಕ್ಲಾಸ್ ,ಇನ್ಯಾವುದೋ ಮಲೆಯಾಳಂ ಹಬ್ಬ ಅದಕ್ಕೆ ಹೊಂದುವ ಉಡುಪು,ಒಟ್ಟಿನಲ್ಲಿ ನಮಗೆ ಗೊತ್ತಿರುವ,ಗೊತ್ತಿಲ್ಲದ ಹಬ್ಬಗಳು ಆ ಮಹಾನುಭಾವನಿಂದ ಗೊತ್ತಾಯಿತು!ಇಷ್ಟೆಲ್ಲಾ ಆದರು ಭಗವಂತ ಕರುಣಾಮಯಿ ಅಂತ ಅನ್ನಿಸಿತು,ಯಾಕೆ ಗೊತ್ತೇ? ಸಧ್ಯ ಆ ಸಮಯದಲ್ಲಿ ಗೊಮ್ಮಟನಿಗೆ ಮಹಾ ಮಸ್ತಕಾಭಿಷೇಕ ಇರಲಿಲ್ಲ..ಇಲ್ಲದೆ ಇದ್ದಿದ್ದರೆ....!!!

Thursday, February 26, 2009

ದೃಷ್ಟಿಕೋನ

ಎಲ್ಲರಿಗು ಪ್ರಿಯವಾದ ದೇವರು ಕೃಷ್ಣ ಅಂತ ಕೆಲವರು ತುಂಬಾ ನಂಬ್ತಾರೆ ,ಅದು ಎಷ್ಟ ಮಟ್ಟಿಗೆ ಅಂತ ಅಂದ್ರೆ ಅಕಸ್ಮಾತ್ ಪ್ರಾಣ ಹೋಗುವಷ್ಟು ತೊಂದ್ರೆ ಆದರು ಅವರು ಶಿವಾಲಯ ಇದ್ರೆ ಬಚ್ಚಿಟ್ಟು ಕೊಳ್ಳೋಲ್ಲ ,ಹಾಗಂತ ನಮ್ಮ ಕಡೆ ಕೆಲವರ ಬಗ್ಗೆ ತಮಾಷೆ ಮಾಡ್ತಾ ಇರ್ತಾರೆ.ಒಬ್ಬ ಹಿರಿಯ ಹೆಣ್ಣು ಮಗಳು ವೃಕ್ಷ ಪ್ರೇಮಿ,ಆದ್ರೆ ಸಿಕ್ಕಾ ಪಟ್ಟೆ ರಾಮ ಭಕ್ತೆ! ಆಕೆಗೆ ರಾಮ ಬಿಟ್ರೆ ಬೇರೆ ಗಾಡ್ ಇಲ್ಲ,ತನ್ನ ಮನೆ ಮುಂದೆ ಹಿಂದೆ ಇರೋ ಗಿಡಗಳನ್ನು ಪ್ರೀತಿಯಿಂದ ಕಾಣುವ ಆಕೆ ಒಂದು ದಿನ ಗಿಡದ ತುಂಬಾ ಹುವ್ವು ಅರಳಿಸಿಕೊಂಡಿದ್ದ ಗಿಡವನ್ನು ಕತ್ತರಿಸಿ ಹಾಕಿಸುತ್ತ ಇದ್ದರು,ನನಗೆ ತುಂಬಾ ಆಶ್ಚರ್ಯ ಆಯ್ತು.ಯಾಕೆ ಹೀಗ್ ಮಾಡಿದಿರಿ ಅಂತ ಕೇಳಿದರೆ, ಅಯ್ಯೋ ಇದು ಶಿವನಿಗೆ ಪೂಜೆ ಮಾಡೋ ಹುವ್ವು,ಈಗ ಗೊತ್ತಾಯಿತು ಅದಕ್ಕೆ ಕದೆಸಿ ಹಾಕ್ತಾ ಇದ್ದೀನಿ ಅಂತ ಹೇಳಿದ್ದರು. ಅಂತಹುದೇ ಒಂದು ಪ್ರಾಡೆಕ್ಟು,ಆಕೆಗೆ ಕೃಷ್ಣ ಅಂತ ಅಂದ್ರೆ ಎಲ್ಲಿಲ್ಲಿಲ್ಲದ ಪ್ರೀತಿ! ನೋಡೇ ಈ ಕೃಷ್ಣ ಎಲ್ಲರನ್ನು ಆಕರ್ಷಣೆ ಮಾಡ್ತಾನೆ ಕಳ್ಳ! ಅಂತ ದೇವರ ಬಗ್ಗೆ ಮುದ್ದಾಗಿ ಹೇಳಿದರು ಆಕೆ.ಆಗ ನಿಮ್ಮ ಅಭಿಪ್ರಾಯ ತಪ್ಪು ಆಂಟಿ ಅಂತ ಅಂದೇ ,ನೀನೂ ಬಿಡು ಮೊಸರಲ್ಲಿ ಕಲ್ಲು ಹುಡುಕೊಳುಅಂತ ಹೇಳಿ ಚುಚ್ಚಿದರು.ಇರ ಬಹುದು ಆಂಟಿ ಆದರೆ ಸಾಕಷ್ಟು ಹೆಣ್ಣು ಮಕ್ಕಳಿಗೆ ಕೃಷ್ಣ ಆರಾಧ್ಯ ದೈವ ಅಲ್ಲ ಅಂತ ಅಂದೇ. ಅದಕ್ಕೆ ಆಕೆ ಹಾಗಂದ್ರೆ? ಅಂತ ಕೇಳಿದರು.. ಈಗ ನೋಡಿ ಕೃಷ್ಣ ಒಂದು ಹಾಡಿನ ಬಗ್ಗೆ ಹೇಳ್ತೀನಿ ... ಮೆಲ್ಲ ಮೆಲ್ಲನೆ ಬಂದನೆ ಗೋಪಮ್ಮ ಕೇಳೆ ...,ತಕ್ಷಣ ಆಕೆ ಆಹಾ ಎಂತ ಹಾಡು ಅಲ್ವ.. ಅಂತ ಕೇಳಿದರು,ಹಾಡು ಮುಂದೆ ಕೇಳಿದ್ದೀರಾ ಅಂದೇ,ಆಕೆ ಸುಮ್ಮನೆ ಇದ್ದರು,ಮೊಸರು ಮಾರಲು ಹೋದರೆ ನಿನ್ನಯ ಕಂಡ ಹೆಸರೇನೆಂದು ಕೇಳಿದ? ಹಸನಾದ......ಹಸುಮುಖಿಯರನು ಬಸಿರು ಮಾಡಿದ ಕೃಷ್ಣ ! ಅಂತ ಹೇಳಿ ಅವರ ಕಡೆ ನೋಡಿ ,ಹೇಳಿ ಆಂಟಿ ದೇವರ ಬಗ್ಗೆ ಭಕ್ತ ಇಷ್ಟು ಜಗಜ್ಜಾಹೀರವಾಗಿ ಬರೆದರೆ ಹೆಣ್ಣು ಮಕ್ಕಳಿಗೆ ಇಷ್ಟಾ ಆಗುತ್ತಾ? ಅಂತ ಕೇಳಿ.ನನ್ನ ಮಾತು ಆಕೆಗೆ ಇಷ್ಟ ಆಗಲಿಲ್ಲ,ಅದರ ಒಳ ಅರ್ಥ ಬೇರೆ ಇದೆ ಅಂತ ಅಂದ್ರು..ಬೇರೆ ಯಾವುದೇ ಅರ್ಥ ಇರಲಿ ಆದರೆ ಇದು ಮುಖ್ಯ ಅರ್ಥದ ಪಟ್ಟಿಗೆ ಸೇರುತ್ತೆ ತಾನೆ? ಕೃಷ್ಣ ಹಾಡುಗಳನ್ನು ತುಂಬಾ ಹೆಣ್ಣುಮಕ್ಕಳು ಹಾಡೋದೇ ಇಲ್ಲ,,ಅದು ಅವರ ದೃಷ್ಟಿಕೋನ ಇರಬಹುದು,ಆದರೆ ಇದನ್ನು ಒಪ್ಪಿಕೊಳ್ಳ ಬೇಕು ತಾನೆ ಅಂದೇ..! ಆವತ್ತಿನಿಂದ ಆ ಭಕ್ತೆ ನನ್ನೊಂದಿಗೆ ಮಾತಾಡಿಲ್ಲ!!!

Friday, February 13, 2009

ಯಾವುದು?

ಕನ್ನಡದಲ್ಲಿ ಒಂದು ಪದ ಇದೆ ಪರಾಕಾಷ್ಠೆ ಅಂತ.ಅದು ಭಕ್ತಿ,ಶ್ರದ್ಧೆ,ಪ್ರೀತಿ ,ಅತಿರೇಕ ಹೀಗ ಹಲವು ಅಂಶಗಳಿಗೆ ಅಪ್ಲೆಯ್ ಆಗುತ್ತೆ.ನಾನು ಕೆಲವು ಸ್ತ್ರೀವಾದಿಗಳನ್ನು ತುಂಬಾ ಹತ್ತಿರದಿಂದ ಕಂಡಿದ್ದೇನೆ,ಅವರಲ್ಲಿ ತುಂಬಾ ಜನ ಅತೃಪ್ತ ಹೆಣ್ಣುಮಕ್ಕಳು, ಯಾವ ರೀತಿ ಅಂತ ಬಿಡಿಸಿ ಹೇಳೋಕೆ ಆಗದು.ಆದರೆ ಅವರು ಸಮಾಜ ತುಂಬಾ ಹಿಂದೆ ಇದೆ.ಪುರುಷರ ಮೇಲುಗೈ ಹೆಣ್ಣಿನ ಬೆಳವಣಿಗೆಗೆ ಅಡ್ಡಿ ಆಗಿದೆ ಅಂತೆಲ್ಲ ಭಾಷಣ ಮಾಡುತ್ತಿದ್ದರು.ನನ್ನ ಪರಿಚಿತ ಹೆಣ್ಣು ಮಗಳು ಡೆಕ್ಕನ್ ಹೆರಾಲ್ಡ್ ನಲ್ಲಿ ಫ್ರೀ ಲ್ಯಾನ್ಸರ್ ಆಗಿದ್ದರು.ಅವರಿಗೆ ಸ್ತ್ರೀವಾದಿ ಒಬ್ಬರು ತುಂಬಾ ಕ್ಲೋಸ್.ಆದರೆ ನನ್ನ ಪರಿಚಿತ ಹೆಣ್ಣುಮಗಳು ಸಂತುಪ್ತ ಗೃಹಿಣಿ.ಆಕೆಯಾ ಬರೆಯುವ ಅಭ್ಯಾಸ ಆ ಸ್ತ್ರೀವಾದಿಗೆ ಇಷ್ಟಾ ಆಗ್ತಾ ಇರಲಿಲ್ಲವಂತೆ,ಸಾಕಷ್ಟು ಬಾರಿ ನನ್ನಬಳಿ ಹೇಳಿ ನಕ್ಕಿದ್ದರು ಅವರು.ಅದು ಸಹಜ.ನಾನು ಕಂಡ ಕೆಲವು ಹೆಣ್ಣು ಮಕ್ಕಳು ತಮಗೇನೂ ಬೇಕು ಅಂತ ತಿಳಿಯದ ದ್ವಂದ್ವ ಸ್ಥಿತಿ ಯಲ್ಲಿ ಇದ್ದರು.ಅವರು ಅವರದೇ ಆದ ವಾದ ಸಮರ್ಥನೆ ಇಟ್ಟುಕೊಂಡಿದ್ದರು.ಆದರೆ ಸಾಕಷ್ಟು ಬಾರಿ ಅವರ ಒಂಟಿತನ ನನ್ನ ಕಣ್ಣಿಗೆ ನಿಚ್ಚಳ ವಾಗಿ ಕಂಡು ಬರುತ್ತಿತ್ತು.ಆ ಗುಂಪು ಯಾವುದೇ ರೀತಿಯಲ್ಲೂ ಗಲಾಟೆ ಮಾಡಿ ಸಮಾಜದ ಸ್ವಾಸ್ಥ್ಯ ಕೆಡಿಸೋಕೆ ಪ್ರಯತ್ನ ಮಾಡಿರಲಿಲ್ಲ.ಆದರೆ ಈಗಿರುವ ಚೆಡ್ಡಿ ಪರಿಸ್ಥಿತಿ ನೋಡಿದರೆ ಯಾವ ರೀತಿ ಇಂತಹ ವಿಶಿಷ್ಟ ಪ್ರಾಡಕ್ಟ್ ಗಳನ್ನೂ,ಅವರ ಹರಕತ್ ಗಳನ್ನೂ ಸ್ವೀಕರಿಸ ಬೇಕೋ ತಿಳಿತಾ ಇಲ್ಲ.ಆತ ನಿಂತ ನಿಲುವಿನಲ್ಲೇ ಮಾಡುವೆ ಮಾಡಿಸ್ತೀನಿ ಅಂತ ಅಂದ್ರೆ ಇವರು ಚೆಡ್ಡಿ ತೋರಿಸಿ ಪ್ರತಿಭಟನೆ ಮಾಡೋದು. ಪ್ರೀತಿಗೆ ಅಡ್ಡಿ ಬರುವ ಯಾರಿಗೆ ಆಗಿರಲಿ ಇದೆ ಶಿಕ್ಷೆ ಅನ್ನುವ ಹೊಸ ವಿಧಾನ,ತುಂಬಾ ಅಸಹ್ಯ ಆಗುತ್ತೆ.ಸಮಾಜದಲ್ಲಿ ಪ್ರತಿಯೋರ್ವ ಹೆಣ್ಣಿ ನಲ್ಲೂ ಸ್ತ್ರೀವಾದಿ ಗುಣ ಇದ್ದೆ ಇರುತ್ತೆ.ಅದು ಪರಿಸರದ ಅನ್ವಯ ತನ್ನ ಪ್ರಭಾವ ತೋರುತ್ತದೆ.ಆದರೆ ಇಂತಹ ಅತಿರೇಕದ ಪರಾಕಾಷ್ಟೆಯು ಎಂದಿಗೂ ಸ್ತ್ರೀವಾದಿ ಅಂಶ ಆಗುವುದೇ ಇಲ್ಲ.ಪ್ರತಿಭಟನೆ ಅಪಹಾಸ್ಯ ,ಅಸಹ್ಯದ ಮಾರ್ಗ ಹಿಡಿ ಬಾರದು.ಎದುರಾಳಿ ಸೋಲ ಬೇಕು,ನಮ್ಮ ಹೋರಾಟ ಇತರರಿಗೆ ಮಾದರಿ ಆಗ ಬೇಕು, ಇವೆರಡು ಸಾಧ್ಯ ಮಾಡುವಂತ ಅನೇಕ ಉತ್ತಮ ಮಾರ್ಗಗಳು ಇವೆ.ಅದು ಬಿಟ್ಟು ನಮ್ಮ ಹಿರಿಯ ನಾಯಕಮಣಿ ಪಬ್ ಭರೋ ಚಳುವಳಿಗೆ ಕರೆ ಕೊಟ್ಟರೆ ಅದಕ್ಕಿಂತಲೂ ತಮಾಷೆ ಸಂಗತಿ ಇನ್ನು ಏನಿದೆ.ಪಬ್ಗೆ ಹೋಗೋದು ಒಂದು ಅಭ್ಯಾಸ,ಅದು ಸಂಸ್ಕೃತಿ ಅಲ್ಲ.ಅಭ್ಯಾಸಕ್ಕೂ ಹಾಗು ಸಂಸ್ಕೃತಿಗೂ ತುಂಬಾ ವ್ಯತ್ಯಾಸ ಇದೆ.ಆ ಎರಡು ಪದಕ್ಕೂ ಬೇರೆ ಬೇರೆ ಅರ್ಥಗಳಿವೆ... ಅದನ್ನು ತಿಳಿದು ಕೊಳ್ಳುವುದು ತುಂಬಾ ಮುಖ್ಯ.

Saturday, February 7, 2009

ಮಾತುಗಾರರು..

ನನಗೆ ಕೆಲವು ಮಾತು ಬಾರದ ಹೆಣ್ಣು ಮಕ್ಕಳು ಆಗಾಗ ಸಿಕ್ತಾರೆ.ನೋಡಲು ಒಬ್ಬರಿಗಿಂತ ಒಬ್ಬರು ಸುಂದರಿಯರು.ಕಣ್ಣಲ್ಲಿ ತುಂಟತನ,ಮಾತಲ್ಲಿ ಉಲ್ಲಾಸ (ಬರಿ ಕೈ ಅಲುಗಾಡಿಸೋದು),ನಗು,ನಗು,ತುಂಬಾ ನಗು.ಒಬ್ಬರನ್ನೊಬ್ಬರು ಚೆಡಿಸಿಕೊಂದು ಪ್ರಪಂಚ ಮರೆಯುತ್ತಾರೆ.ಜೊತೆಗೆ ಆಗಾಗ ಬರುವ ಮೆಸೇಜ್ ಗಳನ್ನೂ ಓದಿ ಉತ್ತರಿಸುತ್ತ ತಮ್ಮ ಲೋಕದಲ್ಲಿ ಮುಳುಗಿ ಬಿಡುತ್ತಾರೆ.ಅಷ್ಟು ಜನ ಹೆಣ್ಣು ಮಕ್ಕಳಿಗೆ ನನ್ನನ್ನು ಚೆಡಿಸೋಕೆ ತುಂಬಾ ಇಷ್ಟ.ಅದರಲ್ಲಿ ಒಬ್ಬಳು ಮಾತ್ರ ಏನಾದರೊಂದು ಕೀಟಲೆ ಮಾಡಿ ನಗ್ತಾಳೆ.ವಯುಕ್ತಿಕವಾಗಿ ನನಗೆ ಅವರ ವರ್ತನೆ ಎಂದಿಗೂ ಕೋಪ ತರಿಸಿಲ್ಲ.ಅವರ ಆತ್ಮವಿಶ್ವಾಸ ನನಗೆ ಅನೇಕ ಸಂದರ್ಭಗಳಲ್ಲಿ ಗುರುವಾಗಿ,ಗೆಳತಿಯಾಗಿ... ನಿಂತಿದೆ. ಈ ಹೆಣ್ಣುಮಕ್ಕಳು ಕಂಪ್ಯೂಟರ್ ಆಪರೇಟರ್ ಗಳು.ತಮ್ಮ ವೃತ್ತಿ ಬಗ್ಗೆ ಅಪಾರ ಹೆಮ್ಮೆ.ನೀನೂ ಏನು ಮಾಡೋದು ಅಂತ ಪ್ರತಿಬಾರಿ ಕೇಳುತ್ತಾರೆ, ಹೇಳಿದರೆ ಪಾಪ ! ಅಂತ ಅಂತಾರೆ.ಅವರ ಜೊತೆ ಮಾತನಾಡುವಾಗಹೆಚ್ಚು ಗಮನ ಇಡಬೇಕು,ಎಲ್ಲದಕ್ಕಿಂತಲೂ ಸಹನೆ ಅತಿ ಮುಖ್ಯ.ಒಂದುಸರ್ತಿ ಅವರ ಬಾಂಧವ್ಯದೊಳಗೆ ಸೇರ್ಪಡೆ ಆದರೆ ಅಲ್ಲಿಂದ ಬರುವುದೇ ಬೇಡ ಅಂತ ಅನ್ನಿಸುತ್ತದೆ.ಬೇಸಿಗೆ ಕಾಲದ ಆಹ್ಲಾದಕರ ಸಂಜೆಯಂತೆ ಹಾಗು ಮಲ್ಲಿಗೆ ಸುವಾಸನೆಯಂತೆ ಮನಸ್ಸು ಖುಷಿ ಆಗುತ್ತದೆ.ನೀವು ಅಂತಹ ಬಾಂಧವ್ಯದ ಸದಸ್ಯರಾಗಿ...:)