Wednesday, June 15, 2011

ಸತ್ಯ ಹರಿಶ್ಚಂದ್ರ ಹಾಗು ನೋಡುಗರ ಕಷ್ಟ!!!


ಗಣಪತಿ ಹಬ್ಬ ಬಂತು ಅಂದ್ರೆ ಎಲ್ಲರಿಗು ಖುಷಿ.ಏಕೆ ಅಂತ ಅಂದ್ರೆ ಕೆಲವರಿಗೆ ಕಡುಬಿನ ಆಸೆ ಒಂದಷ್ಟು ಜನಕ್ಕೆ ಗಣಪನ ಮೇಲೆ ಪ್ರೀತಿ ,ಕೆಲವರಿಗೆ ಆ ಸಂಭ್ರಮದ ಬಗ್ಗೆ ಉತ್ಸಾಹ.ಗಣಪತಿ ಹಬ್ಬ ಎಲ್ಲ ವಿಷಯದಲ್ಲೂ ಸರಿ ಆದರೆ ರಾತ್ರಿ ಕಥಾ ಶ್ರವಣ ಇದೆಯಲ್ಲ ಆ ಕಥೆ ಯಾರಿಗೂ ಬೇಡ, ಯಾಕೆಂದ್ರೆ ನಾವು ಹುಟ್ಟಿದ ದಿನದಿಂದ ಬದುಕಿರುವ ತನಕ ಕೇಳಿಸಿಕೊಳ್ಳಲೇ ಬೇಕು.ಅದೊಂದು ಅಲಿಖಿತ ಒಪ್ಪಂದ.ಓಹ್ ಗಣು ಸೇವ್ ಅಸ್ ಅಂತ ಕೇಳಿಕೊಂಡರೆ ನಿಮಗಿಂತ ಹೆಚ್ಚು ಕಾಲದಿಂದ ನನ್ನ ಕಥೆ ಸಮಸ್ತ ಭಕ್ತ ಕೋಟಿ ಬಾಯಲ್ಲಿ ಕೇಳಿಸಿಕೊಳ್ತಾ ಇದ್ದೀನಿ ನಿಮಗೇನು ಅಂತ ಕಷ್ಟಾ ಅಂತ ಮೌನವಾಗಿ ಕುಳಿತೆ ಬಿಟ್ಟಿದ್ದಾನೆ ಭಗವಂತ.ಈ ವಿಷ್ಯ ಯಾಕೆ ಬಂತುಂತ ಅಂದ್ರೆ ನಮ್ಮ ಓಲ್ಡ್ ಈಜ್ ಗೋಲ್ಡ್ ಸಿನಿಮಾಗಳಲ್ಲಿ ಒಂದಾದ ಸತ್ಯ ಹರಿಶ್ಚಂದ್ರ ಸಹ ಇದೆ ಗ್ರೂಪಿಗೆ ಸೇರುತ್ತೆ. ಹೇಗೆ ಅಂತ ಅಂದ್ರೆ. ಸತ್ಯ ಹರಿಶ್ಚಂದ್ರ ,ಸುಖವಾಗಿದ್ದು ರಾಜ್ಯ ಆಳ್ತಾಯಿದ್ದಾಗ ವಿಶ್ವಮಿತ್ರ ನನ್ನು ಎದುರು ಹಾಕಿಕೊಂಡು ಬ್ಯಾಡ ಆ ಕಥೆ.ಹರಿಶ್ಚಂದ್ರನಾಗಿ ಡಾ.ರಾಜ್ ,ಚಂದ್ರಮತಿ-ಪಂಡರಿ ಬಾಯಿ,ಲೋಹಿತಶ್ವನಾಗಿ-ಕುಟ್ಟಿ ಪದ್ಮಿನಿ,ವಿಶ್ವಾಮಿತ್ರನಾಗಿ ಉದಯ ಕುಮಾರ್,ನಕ್ಷತ್ರಿಕ ನರಸಿಂಹ ರಾಜು ಹೀಗೆ ರಸಭರಿತ ಸಿನಿಮ ನೋಡೋಕೆ ಖುಷಿ ಆಗುತ್ತೆ.ಆದರೆ,ನೀವು ಅಯ್ಯೋ ಒಂದ್ಸಲ ನೋಡಿದ್ದೀನಿ ಬಿಡು ಅಂತ ಪ್ರಸಾರ ಆಗ್ತಾಯಿರೋ ಚಾನೆಲ್ ಬಿಟ್ಟು ಬೇರೆ ಚಾನಲ್ ಕಡೆ ಹೊರಟರೋ ಹರಿಶ್ಚಂದ್ರ ನಿಗಿಂತ ಕಷ್ಟ ಕೊಡ್ತಾರೆ ಹಿರಿಯರು.ಯಾಕೆಂದ್ರೆ ಅವರ ಪ್ರಕಾರ ಸತ್ಯ ಹರಿಶ್ಚಂದ್ರ ನ ಕಥೆ ನೋಡುವ,ಕೇಳುವ ಕೆಲಸ ಅರ್ಧಕ್ಕೇ ಬಿಡಬಾರದು ,ಅಕಸ್ಮಾತ್ ಬಿಟ್ಟರು ಕಷ್ಟ ದಲ್ಲಿರುವ ಹರಿಶ್ಚಂದ್ರನನ್ನು ಅರ್ಧಕ್ಕೇ ಕೈ ಬಿಡ ಬಾರದು.ಪ್ರಾಯಶ: ಹಿಂದಿನ ಬ್ಲಾಕ್ ಅಂಡ್ ವೈಟ್ ಹರಿಶ್ಚಂದ್ರ ಈರೀತಿ ಗೆದ್ದನ? ಯಪ್ಪಾ ಗೊತ್ತಿಲ್ಲ ಸಿವ್ನೆ.ಆದ್ರೆ ಆಪರಿ ಸಿನಿಮಾಗೆ ಬಣ್ಣ ಪುಸಿದ್ರು ಹರಿಶ್ಚಂದ್ರ ಓಕೆ ಯಾಕೋ ಆಗ್ಲಿಲ್ಲ.ಆದರು ಕಪ್ಪು ಬಿಳಿಲಿ ಸಿಗೋ ಮಜಾ ಕಲರ್ ನಲ್ಲಿ ಸಿಕ್ಕಲ್ಲ ಬಿಡಿ ದಿತ್ತಿರಿ ದಿತ್ತಿರಿ ! ಮಜಾ ಸಿಕ್ಕೋದು ಹಳೆ ಸಿನಿಮಾದಲ್ಲಿ .ಹಾಗೆ ಭಕ್ತರು ಸಹ ಏನೋ ಒಂದು ಕಾರಣ ಇಟ್ಕೊಂಡು ಹರಿಶ್ಚಂದ್ರನನ್ನ ಪೂರ್ತಿ ನೋಡೇ ನೋಡ್ತಾರೆ ಮತ್ತೆ ಮತ್ತೆ...!

No comments:

Post a Comment