Saturday, November 28, 2009

ಜ್ಞಾಪಕ ಇರಲಿ


ಇತ್ತೀಚೆಗೆ ನೀನು ಯಾವುದೇ ಪುಸ್ತಕದ ಬಿಡುಗಡೆ,ಒಟ್ಟಾರೆ ಎಲ್ಲೂ ಕಾಣ್ತಾನೆ ಇಲ್ಲ ಅಂತ ಸಣ್ಣಗೆ ರೇಗಿದ ಗೆಳೆಯ... ಮಾತು ಮುಂದುವರೆಸುತ್ತಾ  ನಿಜ ತಾನೇ ನನ್ ಮಾತು ಎಂದು ಕೇಳಿದ.ನೂರಕ್ಕೆ ನೂರಷ್ಟು ನೂರು ನಿಜ ಕಣಪ್ಪ ಎಂದು ಹೇಳಿ ನಕ್ಕೆ.ಕೇವಲ ಇತ್ತಿಚೆಗಲ್ಲ, ಈ ವರ್ಷದಲ್ಲಿ ಜನವರಿಯಿಂದ ಈವರೆಗೂ ಯಾವುದೇ ಕಾರ್ಯಕ್ರಮಕ್ಕೂ ಭಾಗವಹಿಸಿಲ್ಲ,ಅದರಲ್ಲಂತೂ  ಪುಸ್ತಕದ ಬಿಡುಗಡೆಗೆ ಉಹುಂ ಹೋಗೆ ಇಲ್ಲ ಬೇಕಾದಷ್ಟು ಸಮಯ ಇದ್ರು...ಎಂದು ಹೇಳಿದೆ,ಯಾಕೇಂತ ಅಂದ ಗೆಳೆಯ,ನನ್ನ ಮಾತು ಆಶ್ಚರ್ಯ ತರಿಸಿತ್ತು.ಪುಸ್ತಕ ಬಿಡುಗಡೆ ಮಾತ್ರವಲ್ಲ  ಕೆಲವು ಸಂಗತಿಗಳು ನನಗೆ ಅತ್ಯಂತ ಪ್ರಿಯ ಎನ್ನುವ ಸಂಗತಿ ಗೆಳೆಯ ಬಲ್ಲ,ಅಂತಹುದರಲ್ಲಿ ಈ ದಿವ್ಯ ಮೌನದ ಬಗ್ಗೆ ಸಣ್ಣ ಆತಂಕ.ಇಲ್ಲ ಗೆಳೆಯ ನೀನುತಿಳಿದಿರುವಂತೆ ಏನು ಆಗಿಲ್ಲ ,ಯಾಕೋ ಬೇಡ ಅಂತ ಅನ್ನಿಸಿತು,ಮುಖ್ಯವಾಗಿ ನಾನು ಒಬ್ಬಳು ಹೋಗದೆ ಇದ್ರೆ ಹಾಗೂ ನನ್ನಂತಹವಳು ಒಬ್ಬಳು ಪುಸ್ತಕ ಓದದೆ ಇದ್ರೆ ಆ ರೈಟರ್ ಗೆ ಯಾವುದೇ ರೀತಿಯ ನಷ್ಟ ಆಗಲ್ಲ ಈ ಸತ್ಯ ನೀನು ಬಲ್ಲೆ.ಅದಲ್ಲದೆ ಸಾಕಷ್ಟು ಜನರ ಜೊತೆ  ಒಂದೊಳ್ಳೆಯ ಸಂಪರ್ಕ ಇಟ್ಟುಕೊಂಡಿದ್ದರು,ಅವರ ಪುಸ್ತಕ ಓದಿದರೂ ಒಂದು ಸಲಕ್ಕೂ ನಾನು ಅವರ ನೆನಪಿನ ಬುತ್ತಿಯ ತುತ್ತಾಗಲೇ ಇಲ್ಲ :) .ಆದ್ರೆ ನಾನು ಎಲ್ಲರಿಗು ಗೊತ್ತು ಅನ್ನುವ ಹುಂಬ ಭ್ರಮೆಯಲ್ಲಿ ಬದುಕಿದೆ.ಅದು ಸುಳ್ಳು ಅಂತ ಗೊತ್ತಾದ ನಂತರವೂ  ಪದೇಪದೆ ಒಂದೇ ರೀತಿಯ ತಪ್ಪು ಮಾಡುವುದರಿಂದ ನನಗೆ ನಾನು ಮೋಸ ಮಾಡಿಕೊಂಡ೦ಗೆ ಅಲ್ವ ! ಹಾಗೆ ಅನ್ನಿಸೋಕೆ ಶುರು ಆಯ್ತು.ನನ್ನ ಗಮನ ಸ್ವಲ್ಪ ಛಿದ್ರ ಛಿದ್ರ  ಆಗೋಕೆ ಆರಂಭ ಆಯ್ತು,ಉಹುಂ ಇಂತಹ ಸ್ವಭಾವ ನನ್ನದಲ್ಲ,ಅದಕ್ಕೆ ಕಾರಣ ಯೋಚಿಸಿದಾಗ ತಿಳೀತು,ನನ್ನ ಕಾಯಿಲೆಗೆ ನಾನೇ ಮದ್ದು ಅಂತ....!  ಗೊತ್ತಾದ ಬಳಿಕವು ನಾನು ಸುಮ್ಮನೆ ಇದ್ರೆ  ಕಾಯಿಲೆ ಜಾಸ್ತಿ ಆಗುತ್ತೆ  ಅಲ್ವ?! ನಿನಗೆ ಇನ್ನೊಂದು ಸಂಗತಿ ಹೇಳ್ ಬೇಕು ಇತ್ತೀಚೆಗೆ ದಟ್ಸ್  ಕನ್ನಡ ಸಂಪಾದಕ  ಶಾಮ ಸುಂದರ್ ಅವರು ತಮ್ಮ ಫೋನ್ ಸ್ವಿಚ್ ಆಫ್ ಮಾಡಿ ಕುಳಿತು ಬಿಟ್ಟಿದ್ರು.ನನಗೆ ಪರಿಚಯ ಆದ ದಿನದಿಂದ ಹಾಗೆ ಮಾಡಿದ್ದು ಕಂಡಿರಲಿಲ್ಲ ,ಕೊನೆಗೆ ಸ್ವಲ್ಪ ಹೊತ್ತಾದ ಬಳಿಕ ಆನ್ ಮಾಡಿದರು,ಆಶ್ಚರ್ಯ ಚಕಿತಳಾಗಿ ಕೇಳಿದೆ ಇದೇನು ಹೀಗೆ ಅಂತ...! ಇಲ್ಲ ಸುಮ್ನೆ ಕಷ್ಟ ಆಗುತ್ತೆ ಕೆಲಸ ಮಾಡೋಕೆ,ಮತ್ತೊಂದು ಕೆಲವು ಫೋನ್ಗಾಗಿ  ನಾವು ಕಾಯ್ತಾ ಇರ್ತೀವಿ ಆದರೆ ಅದು ಬರೋದೆ ಇಲ್ಲ....! ಹೇಳ್ತಾ ಹೋದರು, ಆ ಬಳಿಕ ನಾನು ನಕ್ಕು ಹೇಳಿದ್ದು ನನ್ ಪ್ರಕಾರ  ನಮ್ಮ ಬದುಕಿನ ಬಗ್ಗೆ ಕಾಳಜಿ ವಹಿಸುವವರು ಕೆಲವೇ ಕೆಲವರು,ಅವರಿಗೆ ನಮ್ಮ ಸಣ್ಣಪುಟ್ಟ ಬೇಸರಗಳು ದೊಡ್ಡದಾಗಿ ಕಾಣುತ್ತೆ, ಅವರು ನಾವು ಬ್ಯಾಡ ಅಂತ ಅಂದ್ರು ನಮ್ಮನ್ನು ಸಂಪರ್ಕಿಸುತ್ತ  ಇರ್ತಾರೆ,ಸಾಕಷ್ಟು ಸರ್ತಿ ನಾವು ಮೂರ್ಖತನದಿಂದ ಸ್ವಿಚ್ ಆಫ್  ಮಾಡಿ ,ಮನದ ಬಾಗಿಲು ಮುಚ್ಚಿಟ್ಟು  ಸ್ವಸ್ಥವಾಗಿ ಕುಳಿತು ಬಿಟ್ಟಿರುತ್ತೇವೆ.,ನಾವು ಬಾಗಿಲು ತೆಗೆದಾಗ ಆ ಹೃದಯವಂತರು ಮಿಸ್ ಆಗಿ ಬಿಟ್ಟಿರುತ್ತಾರೆ ,ಯಾಕೆಂದ್ರೆ  ನಮ್ಮಂತೆ ಅವರಿಗೂ ಸಮಯ ಬಹಳ  ಮುಖ್ಯ ! ಸಿಕ್ಕ ಅಮೃತ ಕಲಶ ಕೈಯಾರೆ ನಾವೆಬಿಸಾಕಿ ಬಿಟ್ಟು ಆಮೇಲೆ ಅದಕ್ಕಾಗಿ  ಹುಡುಕಿದರೆ ಅದು ಮತ್ತೊಬ್ಬರ ಕೈಗೆ ಸಿಕ್ಕಿರುತ್ತೆ, ಶಾಶ್ವತವಾಗಿ ಕಳೆದುಕೊಂಡ ನಮಗೆ ಚಡಪಡಿಕೆ  ಮಾತ್ರ  ಸಿಕ್ಕೋದು.ಯಾಕೆಂದ್ರೆ ನಾವು ಮರೆತರೆ ಅವರಿಗೆ ಜ್ಞಾಪಕ ಇಟ್ಟುಕೊಳ್ಳುವ ದರ್ದು ಇರಲ್ಲ .ಪ್ರೀತಿಸುವ- ಕಾಳಜಿ ವಹಿಸುವವರನ್ನು ಎಂದಿಗೂ ಬಿಟ್ಟು ಕೊಡ ಬಾರದು.ನಿಮ್ಮ ಫೋನ್ ಬುಕ್ ನಲ್ಲಿ ಇರುವ ಅಷ್ಟು ಹೆಸರಲ್ಲಿ  ಈ ಲಿಸ್ಟ್ ಗೆ ಸೇರಿದವರು ಕೇವಲ ಎಂಟರಿಂದ ಹತ್ತು ಜನ ಇರಬಹುದು, ಅವರನ್ನು ಎಂದಿಗೂ ಬಿಡಬೇಡಿ...! ಅಕಸ್ಮಾತ್  ದಿವ್ಯ ಮೌನದ ಅಗತ್ಯ ಇದೆ ಅಂದಾಗ ಪುಟ್ಟ  ಸಹನೆ ತೆಗೆದುಕೊಂಡು ಆ ಕೆಲವೇ ಜನಕ್ಕೆ ಸ್ವಲ್ಪ ಹೊತ್ತು ನಾನು ಸಿಗಲ್ಲ ಅಂತ  ಮೆಸೇಜ್ ಮೂಲಕಹೇಳಿಬಿಡಿ. ಇದು ನನ್ನ ಅಭಿಪ್ರಾಯ,ಸಾರಿ ನಾನು ಹೀಗೆ ಒಂದುಚೂರು ತಲೆಹರಟೆ  ಎಂದುಹೇಳಿದೆ,ಶಾಮ್ ಜೋರಾಗಿ ನಕ್ಕು ಸ್ವೀಟ್ ಈಡಿಯಟ್  ಎಂದರು. ..! ಮಾತು ಎಲ್ಲಿಗೋ ಹೊಯ್ತಲ್ವ ಗೆಳೆಯ,ನಿನಗೂ ನನ್ನ ಸಲಹೆ ಎಂದಿಗೂ ಮರೆತವರ ಬಳಿ ನಿನ್ನ ಬಗ್ಗೆ ಜ್ಞಾಪಿಸಲು ಹೋಗಬೇಡ...! ಗೆಳೆಯ ಅಕ್ಕರೆಯಿಂದ ನಕ್ಕ !