Saturday, April 4, 2009

ಆಹಾ ಕೋಸಂಬರಿ...!

ರಾಮನವಮಿ ಬೇಸಿಗೆಯ ಹಬ್ಬ.ಸಾಮಾನ್ಯವಾಗಿ ಇದು ಒಂದು ಸಾರ್ವಜನಿಕರ ಹಬ್ಬ. ಪಾನ ಹೆಸರುಬೇಳೆ ಕೋಸಂಬರಿ ಇದರ ವಿಶೇಷತೆ.ಆದರೆ ಇದರ ಜೊತೆ ನೀರು ಮಜ್ಜಿಗೆ ,ಹಣ್ಣಿನ ರಸಾಯನ ಹೀಗೆ ಜಿಹ್ವಾಚಪಲಿಗರ ಶಕ್ತಿಯ ಅನುಗುಣವಾಗಿ ಲಿಸ್ಟ್ ದೊಡ್ಡದಾಗುತ್ತಾ ಹೋಗುತ್ತದೆ.ಅವೆಲ್ಲ ಇರಲಿ.ರಾಮನವಮಿ ಸಂದರ್ಭದಲ್ಲಿ ಮಾರ್ಕೆಟ್ನಲ್ಲಿ ಹೆಚ್ಚು ಕಾಣ ಸಿಗೋದು ಸೌತೆ ಕಾಯಿ ,ಮಾವಿನ ಕಾಯಿ,ಕರಬೂಜದ ಹಣ್ಣು , ಕಲ್ಲಂಗಡಿ....!ಹೀಗೆ ಬಾಯಾರಿಕೆ ತಣಿಸುವ ಹಣ್ಣು ತರಕಾರಿಗಳು.ಅವೆಲ್ಲ ಪಕ್ಕಕ್ಕೆ ಇರಲಿ.ರಾಮ ಉತ್ತರ ಭಾರತದ ನಿವಾಸಿ.ಆತ ದೇವರಾಗಿದ್ದರು ಮನುಷ್ಯನ ರೂಪ ಪಡೆದ ಬಳಿಕ ಮನುಷ್ಯನಂತೆ ಮಾರ್ಪಾಟು ಆದ ಅನ್ನುವ ಸಂಗತಿ ಎಲ್ಲಿಯೋ ಓದಿದ್ದ ನೆನಪು.ಹಾಗೆ ಆಗಿದ್ದರೆ ಆತನಿಗೆ ಈ ಹಸಿ ಕೋಸಂಬರಿ ಇಷ್ಟ ಆಗೋಕೆ ಸಾಧ್ಯಾನೆ ಇಲ್ಲ.ಯಾಕೆ ಅಂತ ಅಂದ್ರೆ ಆತನ ಊಟದ ಶೈಲಿ ಭಿನ್ನ.ಯಾಕೆ ಹೀಗೆ ಹೇಳಿದೆ ಅಂತ ಅಂದ್ರೆ ನಮ್ಮ ನೆರೆಯ ರಾಜ್ಯ ತಮಿಳುನಾಡಿನ ನಿವಾಸಿಗಳಿಗೆ ಈ ಪದಾರ್ಥ ಗೊತ್ತಿಲ್ಲ.ಅಂತಹುದರಲ್ಲಿ ಉತ್ತರ ಪ್ರದೇಶದ ರಾಮನಿಗೆ ಹೇಗೆ ಗೊತ್ತಿರಲು ಸಾಧ್ಯ? ಅನ್ನುವ ಪ್ರಶ್ನೆ ಇಲ್ಲಿ ಮೂಡಿ ಬರುತ್ತದೆ.ಪ್ರಾಯಶ: ಆತ ಸಾಕಷ್ಟು ವರ್ಷ ದಕ್ಷಿಣ ಭಾರತದಲ್ಲಿ ಅದರಲ್ಲೂ ಕರ್ನಾಟಕದಲ್ಲಿ ಸೆಟಲ್ ಆಗಿದ್ದಾಗ ಕಾಡಲ್ಲಿ ಋಷಿಗಳಿಂದ ಇದರ ರುಚಿ ಸವೆದಿರ ಬೇಕು.ಅದು ಪ್ರಿಯ ಆಗಿ ರಾಮನವಮಿಯ ಮೆಚ್ಚಿನ ಡಿಶ್ ಆಗಿತ್ತು ಅಂತ ಕಾಣುತ್ತೆ.ಮುಂದೆ ಇದೆ ರಾಮ ಭಕ್ತರ ಮನ -ನಾಲಿಗೆ ತಣಿಸಿರ ಬೇಕು.ಏನಾದರು ಸರಿ ಪಾನಕ ಹೆಸರುಬೇಳೆ ಇಲ್ಲದ ರಾಮನವಮಿ ಬೆಲ್ಲ ಅಥವಾ ಸಕ್ಕರೆ ಇಲ್ಲದ ಪಾನಕದಂತೆ ಸಪ್ಪೆ ಸಪ್ಪೆ!