Saturday, March 21, 2009

ಚಿಲ್ಲರೆ... ಚಿಲ್ಲರೆ..

ಚಿಲ್ಲರೆ ಅನ್ನುವ ಪದ ನಿಜ ಬದುಕಲ್ಲಿ ಹೆಚ್ಚು ಬಳಕೆ ಮಾಡುವುದಿಲ್ಲ.ಯಾಕೆ ಅಂತ ಎಲ್ಲರಿಗು ಗೊತ್ತು.ಯಾವುದಾದರು ವ್ಯಕ್ತಿ ತನ್ನ ಅಲ್ಪ ಬುದ್ಧಿಯಿಂದ ಪ್ರಸಿದ್ಧಿ ಆಗಿದ್ದರೆ ಛಿ !ಚಿಲ್ಲರೆ ಬುದ್ಧಿ ಅಂತ ಹೇಳೋದು ವಾಡಿಕೆ.ಅಂದರೆ ನಿಕೃಷ್ಟ ಎನ್ನುವ ಅರ್ಥ ಬರುತ್ತೆ ಅಂತ ಆಯ್ತಲ್ಲ.ಹೀಗೆ ಆರ್ಥಿಕವಾಗಿ ಹಿಂದುಳಿದಿರುವಾಗ ಕನಿಷ್ಠ ಒಂದು ಚಿಲ್ಲರೆ ಅಂಗಡಿ ಇಲ್ಲ ಅನ್ನುವ ಮಾತು ಆಡುತ್ತೇವೆ ಅಥವಾ ಕೇವಲ ಒಂದು ಚಿಲ್ಲರೆ ಅಂಗಡಿ ಇದೆ,ಚಿಲ್ಲರೆ ವ್ಯಾಪಾರಕ್ಕೆ ಈ ಪಾಟಿ ಗಾಂಚಲಿ! ಅಂತ ಆ ವ್ಯಕ್ತಿಯು ತನ್ನ ಚಿಲ್ಲರೆ ಅಸಹನೆಯನ್ನು ಸ್ವಾಭಿಮಾನವಾಗಿ ಬದುಕುತ್ತಿರುವ ಮತ್ತೊಬ್ಬ ವ್ಯಕ್ತಿಯ ಬಗ್ಗೆ ತೋರೋದು ಸಾಮಾನ್ಯ.ಸೋ ಚಿಲ್ಲರೆ ಅನ್ನುವ ಪದ ನಮ್ಮ ಬದುಕಲ್ಲಿ ಈ ರೀತಿ ಅಸ್ತಿತ್ವವನ್ನು ಪಡೆದಿದೆ.ಮೊನ್ನೆ ಹೀಗೆ ಒಂದು ಬ್ಲಾಗ್ ಓದುವಾಗ ಆ ಬ್ಲಾಗಿ ತನ್ನ ಕನ್ನಡದ ಎಲ್ಲ ಬ್ಲಾಗಿಗಳು ಒಟ್ಟಾಗಿ ಸೇರಿ ಚರ್ಚಿಸ ಬೇಕು,ಹರಟಬೇಕು ಎನ್ನುವ ಅನಿಸಿಕೆ ಇಟ್ಟಿದ್ದರು.ಫೈನ್! ಆದರೆ ನನಗೆ ಆ ಬ್ಲಾಗಿನಲ್ಲಿ ಬರೆದಿದ್ದ ಮತ್ತೊಂದು ಪದ ತುಂಬಾ ಆಶ್ಚರ್ಯವನ್ನು ಉಂಟು ಮಾಡಿತು.ಅದೇನೆಂದರೆ-ಚಿಲ್ಲರೆ ಬ್ಲಾಗಿಗಳು!! ನನಗೆ ಗೊತ್ತಿಲ್ಲ ಅವರು ಯಾವ ಅರ್ಥ-ಅನರ್ಥದಲ್ಲಿ ಇಂತಹ ಪದದ ಬಳಕೆ ಮಾಡಿದ್ದಾರೆ ಅಂತ.ಯಾಕೆ ಅಂತ ಅಂದ್ರೆ ನಾನು ಕಂಡಂತೆ ಸಾಕಷ್ಟು ಜನ ಅಕ್ಷರ ಪ್ರಿಯರಿಗೆ ಬರೆಯುವ ಆಸಕ್ತಿ ಹಾಗು ಮನಸ್ಸು ಇರುತ್ತದೆ.ಬ್ಲಾಗ್ ಅಂತಹ ಎಲೆಮರೆಯ ಪ್ರತಿಭೆಗಳ ಹೂತೋಟ .ಇಲ್ಲಿ ಜಾಗ ಇದೆ,ಮಣ್ಣು ಇದೆ,ಮುಷ್ಟಿಯ ತುಂಬಾ ಕನಸಿನ ಬೀಜಗಳಿವೆ ,ಮನದಲ್ಲಿ ಆಸೆಯ ಸೂರ್ಯ ಕಿರಣಗಳಿವೆ,ವಿಷಯಗಳ ಮಳೆ ಹನಿ ಇದೆ.ಇವು ಸಾಕಲ್ವ ಆತ/ಆಕೆ ತನ್ನತನ ತೋರೋದಕ್ಕೆ!ತುಂಬಾ ಸಾಹಿತ್ಯಿಕ ಕನ್ನಡದ ಕೊರತೆ ಕಾಣ ಬಹುದು ಆದರೆ ಬರೆಯ ಬೇಕೆನ್ನುವ ಆ ಶ್ರದ್ಧೆ ,ಹಂಬಲ,ತನ್ಮಯತೆ...!ಇಷ್ಟು ಸಾಕಲ್ವ! ಯಾಕೋ ಅಂದು ಆ ಪದ ಓದಿದಾಗ ನನ್ನ ಮನದಲ್ಲಿ ಇವೆಲ್ಲ ಸುಳಿದಾಡಿತು.

Saturday, March 14, 2009

ಬಣ್ಣ ಬಣ್ಣ!

ಹೀಗೊಮ್ಮೆ ಹೋಳಿ ಹಬ್ಬದಲ್ಲಿ ....ಗೆಳೆಯನ ತಲೆ ತುಂಬಾ ಮೊಟ್ಟೆ ರಸದ ಅವಶೇಷ.ಎಷ್ಟು ಮೊಟ್ಟೆ ಸೇವೆ ಆಗಿದೆ ಅಂತ ಕೇಳಿದೆ.ಸುಮಾರು ಇಪ್ಪತ್ತು.. ಅಂತ ಹೇಳಿದ.ಸೊ ತುಂಬಾ ಜನರ ಪ್ರೀತೀ ತಮ್ಮ ಮೇಲೆ ಅಂತ ರೇಗಿಸಿದಾಗ.ಅಯ್ಯೋ ಅಂತಾದ್ದೇನು ಇಲ್ಲ ನಮ್ಮ ಮೇಲೆ ಕೋಪ ಇದ್ದರು ಮೊಟ್ಟೆ ಒಡೆದು ಸೇಡು ತೀರಿಸಿಕೊಳ್ಳುತ್ತಾರೆ ಅಂತ ನಕ್ಕ.ನಿನ್ನ ಪರಿಸ್ಥಿತಿ ಹೇಗಿದೆ ಅಂತ ಕೇಳಿದೆ.ಅರ್ಧರ್ಧ ಅಂತ ಹೇಳಿ ನಕ್ಕ.ಹೋಳಿ ಬಣ್ಣಗಳ ಹಬ್ಬ,ಕಾಮ ಭಸ್ಮ ಆದ ದಿನ ,ಉತ್ತರ ಭಾರತೀಯರು ಬ್ಹುರಾನ ಮಾನೋ ಹೋಳಿ ಹೈ ಅಂತ ತಮಗೆ ಆಗದೆ ಇರೋರರನ್ನು ಹಿಗ್ಗಾಮುಗ್ಗಾ ಬೈಯ್ಯೋ ದಿನ.ಬಣ್ಣಗಳ ಓಕಳಿ ಆಡಿ ತಾವುಬಯಸಿದ ಸಂಗಾತಿಗೆ ಪ್ರೀತಿ ತೋರೋ ದಿನ. ಬಣ್ಣದ ಬಗ್ಗೆ ನನಗೆ ಮೊದಲಿನಿಂದಲೂ ಆಸಕ್ತಿ.ಯಾವ ಬಣ್ಣವನ್ನು ದ್ವೇಷ ಮಾಡುವುದಿಲ್ಲ.ಕಲರ್ ಥೆರಪಿ ತಿಳಿದವರು ಸಾಮಾನ್ಯವಾಗಿ ಬಣ್ಣಗಳ ಬಗ್ಗೆ ಕುತೂಹಲ ಹೊಂದಿರುತ್ತಾರೆ.ಕಲರ್ ಥೆರಪಿ ನಮ್ಮ ಬದುಕಲ್ಲಿ ಅದೆಷ್ಟು ಉಪಯುಕ್ತವೋ ಗೊತ್ತಿಲ್ಲಾ,ಆದರು ಸಾಕಷ್ಟು ಜನರು ಇದರ ಬಗ್ಗೆ ಹೆಚ್ಚಿನ ಗಮನ ನೀಡುತ್ತಾರೆ.ವಾರದ ಏಳು ದಿನ ನಾವು ಬಳಸುವ ಉಡುಪಿನ ಮೂಲಕ ಕಲರ್ ಥೆರಪಿಯನ್ನು ಜಾರಿಯಲ್ಲಿ ಇಡಬಹುದು.ಭಾನು:-ಕಿತ್ತಳೆ,ಸೋಮ:-ಬಿಳಿ,ಮಂಗಳ:-ಕೆಂಪು,ಬುಧ:-ಹಸಿರು,ಗುರು:-ಹಳದಿ,ಶುಕ್ರ:-ಹಳದಿ,ಹಸಿರು ,ಶನಿ:-ನೀಲಿ,ಕಪ್ಪು.

Friday, March 6, 2009

ಒಲವೆ ನಮ್ಮ ಬದುಕು...

ತುಂಬಾ ದಿನಗಳು ಆದ ನಂತರ ನಾನು ಮತ್ತೆ ಆ ಲೋಕಕ್ಕೆ ಹೋಗುವ ಹಾಗೆ ಆಯಿತು.ಹೆಣ್ಣು ಮಕ್ಕಳ ಪ್ರಪಂಚ..! ಅಲ್ಲಿಗೆ ಗಂಡು ಮಕ್ಕಳು ಬಂದರೆ ಅನಾಥರಾಗಿ! ಬಿಡ್ತಾರೆ,ತುಂಬಾ ವಿಶೇಷವಾದ ವಿಶ್ವ.ಬೆಳಿಗ್ಗೆಯಿಂದ ಸಂಜೆ ಏಳರ ತನಕ ಉಹುಂ !ಸಮಯ ಹೋದದ್ದೇ ಗೊತ್ತಾಗಲಿಲ್ಲ.ಅಲ್ಲಿ ಸುಮಾರು ನೂರಿನ್ನುರುಅಥವಾ ಅದಕ್ಕೂ ಹೆಚ್ಚಿನ ಸಂಖ್ಯೆಯ ಹೆಣ್ಣು ಮಕ್ಕಳು ಇದ್ದರು.ಆ ಕೆಲವು ಗಂಟೆಗಳು ಅಲ್ಲಿದ್ದ ಹೆಣ್ಣುಮಕ್ಕಳಿಗೆ ನಾಚಿಕೆ ಪಾಚಿಕೆ ಊರಿಂದ ಆಚಿಗೆ .ಬೆಂಗಳೂರು ಯುನಿವರ್ಸಿಟಿಯಲ್ಲಿ ಓದುವಾಗ ಆಗಾಗ
ಹಾಸ್ಟಲ್ಗೆ ಹೋಗುತ್ತಿದ್ದೆ.ಅದರಲ್ಲಿ ಕ್ರಿಕೆಟ್ ಮ್ಯಾಚ್ ನೋಡಲು ಹೋದಾಗ ಅಲ್ಲಿ ಇದೆ ರೀತಿಯ ಲೋಕ ...! ಮೊನ್ನೆ ಒಂದು ಕಾರ್ಯಕ್ರಮದಲ್ಲಿ ಪುನಃ ಸ್ತ್ರೀಲೋಕ ದ ಒಡನಾಟ ಸಿಕ್ಕು ತುಂಬಾ ಖುಷಿ ಖುಷಿ! ಕ್ಯಾಟ್ ವಾಕ್,ಡಾಗ್ ಡ್ಯಾನ್ಸ್ ,ಬ್ಯಾಡ ..! ಹೆಣ್ಣು ಮಕ್ಕಳು ವಿಷಲ್ ಹಾಕಿ ಸ್ಪರ್ಧಿಗಳನ್ನು ಹುರಿದುಂಬಿಸುತ್ತ ಇದ್ದರು .ನಾನು ಸ್ವಲ್ಪ ಹೊಟ್ಟೆ ಉರ್ಕೊಂಡೆ,ನಂಗೆ ವಿಷಲ್ ಹಾಕೋಕೆ ಬರಲ್ವಲ್ಲ! ಅದರಲ್ಲಿ ಅರವತ್ತು ವರ್ಷಕ್ಕೂ ಮೇಲ್ಪಟ್ಟ ಹೆಣ್ಣುಮಕ್ಕಳ ಗ್ರೂಪ್ ಸಕತ್ತಾಗಿ ಫ್ಯಾಶನ್ ಷೋ ಮಾಡಿದರು.ಆದರೆ ಅವರಲ್ಲಿ ಒಬ್ಬ ಹಿರಿಯ ಹೆಣ್ಣು ಮಗಳು ನನ್ನನ್ನು ತುಂಬಾ ಆಕರ್ಷಿಸಿದರು.ಕಾರಣ ಇಷ್ಟೇ ಆಕೆ ಇತರ ಹಿರಿಯ ಹೆಣ್ಣುಮಕ್ಕಳಿಗಿಂತ ಬಳುಕಿ ಬಳುಕಿ ಓಡಾಡುತ್ತಿದ್ದರು.ಮುಖದಲ್ಲಿ ಕಳೆ!!!ಚೌಲಿ ಜಡೆ-ಕುಚ್ಚು ಅದಕ್ಕೆ ಬಂಗಾರದ ಟೋಪಿ,ತಲೆಯಲ್ಲಿ ಉಷಾ ಉತ್ತುಪ್ ಅವರಂತೆ ಪ್ಲಾಸ್ಟಿಕ್ ಹುವ್ವು! ಹೊಕ್ಕಳು ಕೆಳಗೆ ಸೀರೆ.ಆದರೆ ತಮಿಳು ಲುಕ್ಕು! (ಮಾತು ಕೇಳಿದ ತಮಿಳಮ್ಮ ಅಂತ ಸ್ಪಷ್ಟ ಆಯ್ತು).ನನ್ನ ಪಕ್ಕ ಭಾರತಿ ಗೌಡ ಈಕೆ ಇತ್ತೀಚೆಗೆ ಮದ್ವೆ ಆದರು ಗೊತ್ತ ಅಂತ ಹೇಳಿದರು .ಹೌದ .. ! ಅಂತ ನನ್ನ ಇನ್ನೊಂದು ಪಕ್ಕ ಕುಳಿತಿದ್ದ ಮತ್ತೊಬ್ಬ ಹೆಣ್ಣುಮಗಳು ಅದರಿ ಬಿದ್ದರು .ತಪ್ಪೇನು ? ನನಗೆ ಈಗ ಒಬ್ಬ ಗೆಳೆಯ ಬೇಕಾಗಿತ್ತು ಅದಕ್ಕೆ ಈನಿರ್ಧಾರ ತೆಗೆದುಕೊಂಡೆ ಅಂತ ನನಗೆ ಹೇಳಿದರು ಆಕೆ ಅಂತ ಭಾರತಿ ಹೇಳಿದರು.ತಪ್ಪೇನು ಇಲ್ಲ ಆಲ್ವಾ ಅಂತ ಅಂದೇ ! ತಲೆ ಅಲುಗಾಡಿಸಿದರು ಆಕೆ .ಅಷ್ಟರಲ್ಲಿ ಡ್ಯಾನ್ಸ್ ಕಾರ್ಯಕ್ರಮ ಶುರು ಆಗಿತ್ತು, ಅಲೈ ಪಾಯಿದೆ ಕಣ್ಣಾ....! ಅಂತ ಕೃಷ್ಣ ಗಾಡ್ ಹಾಡಿಗೆ ನರ್ತಿಸಲು ಆರಂಭಿಸಿದರು ಆ ಇಲವರಸಿ!