Wednesday, June 15, 2011

ಸ್ವಲ್ಪನಾದ್ರು ಗೊತ್ತಿರ ಬೇಕು


ಅಂದು ನಟಿ ರಮ್ಯ ಸಂದರ್ಶನ ನಡೆಯುತ್ತಿತ್ತು .ಈಶ್ವರ ದೈತೋಟ ಸಂದರ್ಶಕರು ಆಗಿದ್ರು.ಆಕೆಯ ಬಾಲ್ಯ,ಯವ್ವನದ ಆರಂಭ,ಸಿನಿಮಾಗೆ ಸಂಬಂಧ ಪಟ್ಟ ಕೆಲವು ಮಾತು,ಊಟಿಯಲ್ಲಿನ ಕೆಲವು ಅನುಭವಗಳು.......ಹೀಗೆ ಸಾಗಿತ್ತು ಪ್ರಶ್ನೆಗಳ ಸುರಿಮಳೆ.ಚಿತ್ರ ರಂಗದಲ್ಲಿ ಸಾಹಿತ್ಯ ಓದಿಕೊಂಡಿರೋ ಪೈಕಿ ಈಕೆಗೂ ಹೆಸರಿದೆ.ಪ್ರಸಿದ್ದ ನಿರ್ದೇಶಕರಾದ ಟಿ.ಎನ್.ಸೀತರಾಮ್ ಅವರ ಚಿತ್ರಕ್ಕೆ ಈಕೆಯನ್ನು ಆಯ್ಕೆ ಮಾಡಿದ್ದೂ ಇದೆ ಕಾರಣಕ್ಕೆಎಂಬುದಿಲ್ಲಿ ಜ್ಞಾಪಕ ಮಾಡಿಕೊಳ್ಳೋದು ಸರಿ.ಈಕೆ ಅದ್ಯಾವ ಪರಿ ಗಲಾಟೆ ಮಾಡಿಕೊಳ್ತಾ ಇದ್ಲು ಅಂದ್ರೆ ಅವ್ಳು ಅಂದ್ರೆ ಎಲ್ಲರಿಗು ಸ್ವಲ್ಪ ಕಿರಿಕಿರಿ .ಆದರೆ ಅವ್ಳು ಟಿ.ಎನ್.ಸೀತಾರಾಂ ಮಾತ್ರ ಅಲ್ಲ ಪ್ರಸಿದ್ಧ ಪತ್ರಕರ್ತ ಹಾಗು ಲೇಖಕ ರವಿ ಬೆಳಗೆರೆ ಅವರಿಗೂ ಕಿರಿಕಿರಿ ಮಾಡಿದ್ದಳು. ಕಾರಣ ಕೇಳಿದಾಗ ಜೀವಂತ ವ್ಯಕ್ತಿ ಯನ್ನು ಹೋಲುವ ಪಾತ್ರ ಮಾಡಲಾರೆ ಅಂತ ನೇರವಾಗಿ ಹೇಳಿದ್ದಳು. ವಿಷ್ಯ ಅದಲ್ಲ ಬಿಡಿ ನಾನೀಗ ಹೇಳೋಕೆ ಹೊರಟಿರೋದು....ವಿಜಯದಶಮಿ ಅಂದು ಈಶ್ವರ ದೈತೋಟ ಆಯುಧಪೂಜೆ ನೀವು ಬೋರ್ಡಿಂಗ್ ಸ್ಕೂಲ್ನಲ್ಲಿ ಇದ್ದಾಗ ಹೇಗೆ ಆಚರಿಸುತ್ತಾ ಇದ್ರಿ ಅಂದಾಗ ,ಅದು ಕ್ರಿಶ್ಚಿಯನ್ ಸ್ಕೂಲ್ ನನಗೆ ಹಬ್ಬಗಳು ಗೊತ್ತಿರಲಿಲ್ಲ ಅಂತ ಅಂದ್ಲು .ಓಕೆ ತಪ್ಪಲ್ಲ.ಆದರೆ ಆಕೆ ಈ ರಂಗಕ್ಕೆ ಬಂದು ಸಾಕಷ್ಟು ವರ್ಷಗಳು ಕಳೆದಿದೆ .ಮುಖ್ಯವಾಗಿ ಆಕೆ ಪಬ್ಲಿಕ್ ಪರ್ಸನಾಲಿಟಿ .ಮೊದಲು ಗೊತ್ತಿತ್ತೋ ಇಲ್ಲವೊ ಅದು ಬೇರೆ ವಿಷ್ಯ .ಆದ್ರೆ ಇಂತಹ ಸಂದರ್ಶನಕ್ಕೆ ಬಂದಾಗ ಆಕೆ ಕೆಲವೊಂದು ಅಂಶಗಳನ್ನೂ ತಿಳಿದು ಕೊಳ್ಳ ಬೇಕು.ಈಶ್ವರ್ ಆಯುಧ ಪೂಜೆ ಬಗ್ಗೆ ಕೇಳಿದರೆ ಈಕೆ ಅಂದು ನಮ್ಮ ಅಮ್ಮ ಬೇವು ಬೆಲ್ಲ ಕಳಿಸಿ ಕೊಡುತ್ತಿದರು ಅಂತ ಹೇಳಿದಳು.ಸಂದರ್ಶಕರು ಪದೇ ಪದೆ ಅದೇ ಪ್ರಶ್ನೆ ಕೇಳಿದರು ಆಕೆ ತಪ್ಪು ತಿದ್ದಿ ಕೊಳ್ಳಲಿ ಅಂತ .ಆದರೆ ಆಕೆ ಪದೇಪದೆ ಹೇಳಿದ್ದು ಆಯುಧ ಪೂಜೆಲಿ ಬೇವು ಬೆಲ್ಲ ತಿಂದ ಕಥೆಯನ್ನೇ !

2 comments:


Anonymous said...
bari heroin adre saladu samanyajnana annodu irabeku annodu noorakke nooru satya.
suma said...
ramyana article thumba channagide. adare avalu karnatakadalli hutti habbada visheshategallanne thiliddilla andare avalu huttiddu vestu.

No comments:

Post a Comment