Saturday, March 1, 2014

ಬ್ಲಂಡರ್



ಕೆಲವು ಬಾರಿ ಬೇಡ ಇನ್ನು ಸಾಕು ಎಂದು ನಿರ್ಧರಿಸಿ ಬಾಂಧವ್ಯಗಳಿಂದ ದೂರವಾಗಲು ಪ್ರಯತ್ನಿಸಿದರೂ   ಸಹ ನನ್ನ ಬಾಳಲ್ಲಿ ಅಂತಹದ್ದೇನು ನಡೆಯಲ್ಲ. ಯಾಕೆಂದ್ರೆ ಮತ್ತೆ ಮತ್ತೆ ಅದು ನನ್ನನ್ನು ಸುತ್ತಿ ಕೊಳ್ಳುತ್ತದೆ. ಜತವಾಗಿ ನನ್ನ ಜೊತೆ ಸಾಗುತ್ತದೆ. ಮತ್ತಷ್ಟು ಹಸಿರಾಗಿ ಬೆಳೆಯುತ್ತದೆ. ಈ ವಿಧಕ್ಕೆ ಏನಂತ ಕರೀತಾರೋ ದಾರ್ಶನಿಕರು ಗೊತ್ತಿಲ್ಲ. ಯಾಕೆಂದ್ರೆ ಇಂತಹ  ಅನುಬಂಧಗಳು ನನ್ನನ್ನು ಮತ್ತೆ ಮತ್ತೆ ಆವರಿಸುತ್ತಲೇ ನನ್ನನು ಮಾನಸಿಕವಾಗಿ ಬೆಳೆಸಿದೆ.. ನನ್ನ ಅನೇಕ ಬಗೆಯ ಸಣ್ಣತನಗಳನ್ನು ದೂರ ಮಾಡಿದೆ..ನನ್ನನ್ನು ಹೆಚ್ಚು ನಿರ್ಲಿಪ್ತಳನ್ನಾಗಿಸಿದೆ. ಮುಖ್ಯವಾಗಿ  ನನ್ನ ಒಳಗಿನ ನನ್ನನ್ನು ಸಾಯಿಸದೇ ಉಳಿಸಿದೆ.
ನಿನ್ನೆ  ಕಿರುತೆರೆಯ ನಟಿಯೊಬ್ಬಾಕೆಗೆ ಸಂದರ್ಶನ ಮಾಡುವ ಕೆಲಸ. ಫೋನಿನ ಮುಖಾಂತರ ಎಲ್ಲ ವಿಷಯವನ್ನು ಹೊರಗೆಡವಿದ್ದಾಯಿತು  . ಪಾತ್ರಗಳನ್ನು  ಮಾಡಿರುವುದು ಬೆರಳೆಣಿಕೆಯಷ್ಟು ಮಾತ್ರ . ಆದರೆ ಅವುಗಳನ್ನೆಲ್ಲ ಮೀರಿರುವ ಸಾಧನೆ ಭರತನಾಟ್ಯದಲ್ಲಿ ಮಾಡಿದ್ದಾರೆ . ಯುಎಸ್ ನಲ್ಲಿ ಬರೋಬ್ಬರಿ ಹದಿನೈದು ವರ್ಷಗಳ ಕಾಲ ಆಕೆಯು ಕಲೆಯ ಸೇವೆ ಮಾಡಿ ಇಲ್ಲಿಗೆ ಬಂದು ಗಂಡಮಕ್ಕಳ  ನೆಮ್ಮದಿಯ ಸಂಸಾರದಲ್ಲಿ ಬದುಕನ್ನು ಆನಂದದಿಂದ ಕಳೆಯುತ್ತಿದ್ದಾರೆ. ಜೊತೆಗೆ ಕಲಾ ಸೇವಾ ಸೌಭಾಗ್ಯ.
ನಿಜ ಹೇಳಬೇಕು ಅಂದ್ರೆ ಆಕೆಯ ಜೊತೆ ಮಾತಾನಾಡೋಕೆ ಕೊಟ್ಟ ಸಮಯ ಬೇರೆ ಆದರೆ ಆಕೆ ಜೊತೆ ಹರಟಲು ಸಾಧ್ಯ ಆಗಿದ್ದು ನಿನ್ನೆ. ಮಾತಾಡಿದ ಬಳಿಕ ಆಕೆ ತುಂಬಾ ಇಂಪ್ರೆಸ್ ಆಗಿದ್ರು ( ದೊಡ್ಡಸ್ತಿಕೆ ಅಲ್ಲ.. ದಯವಿಟ್ಟು ) . ಈಗಾಗಲೇ ಹಲವಾರು ಸಂದರ್ಶನಗಳು ಆಗಿವೆ, ಆದರೆ ನಿಮ್ಮಂತೆ ಕಂಫರ್ಟಬಲ್ ಫೀಲ್ ಆಗುವ ವಾತಾವರಣ, ಪ್ರಶ್ನೆಗಳ ಶೈಲಿ ಎಲ್ಲೂ- ಯಾರು ಕೇಳಲಿಲ್ಲ ..ಎಂದು ಖುಷಿಯಾಗಿ ಹೇಳಿದ್ರು .. ಯಾಕೋ ಮುಜುಗರ ಆಯ್ತು.. ಆದರು ಕೇಳಲೇ ಬೇಕಾಗುತ್ತೆ , ಸರಿ ಇಂದು ಮತ್ತೆ ಆಕೆ ನನಗೆ ಫೋನಿಸಿ ಬೇರೆ ಪತ್ರಿಕೆಯಲ್ಲಿ ಬಂದ ತನ್ನ ಲೇಖನದ ತಿಳಿಸುತ್ತಾ ಅದರಲ್ಲಿನ ಬ್ಲಂಡರ್ ಗಳ ಬಗ್ಗೆ ಹೇಳುತ್ತಾ ಬೇಜಾರಾದರು .ಆಕೆಯ ಪತಿಯ ಹೆಸರನ್ನೇ ಬದಲಾವಣೆ ಮಾಡಿದ್ರು ಬರೆದವರು..ನಾವು ಅಂದ್ರೆ ಬರೆಯೋರು  ಇಂತಹ ಅನೇಕ ತಪ್ಪುಗಳನ್ನು ನಮ್ಮ ಅಜನ್ಮ ಸಿದ್ಧ ಹಕ್ಕು ಅನ್ನುವಂತೆ ಮಾಡ್ತೀವಿ. ಆಕೆಯನ್ನು ಸಮಾಧಾನಿಸಿದ್ದಾಯಿತು.

ಬಾಂಧವ್ಯಗಳು ಅಂದಾಗ ಹೆಚ್ಚು ನೆನಪಾಗುವ ಹೆಸರು ಚಿತ್ರ ಸಿನಿಮಾ ಪತ್ರಿಕೆಯ ಸಂಪಾದಕಿ ತುಂಗಾರೇಣುಕ    ಮತ್ತು ಅವರ ಸೋದರಿ ರಾಜಕುಮಾರಿ. ತುಂಗಾ ಮೇಡಂ, ರಾಜಿ ಆಂಟಿ ಅಂತ ಕರೆಯೋ ವಾಡಿಕೆ.. ತುಂಗಾ ರೇಣುಕಾ ಪತ್ರಿಕಾ ರಂಗದಲ್ಲಿ ಸಾಕಷ್ಟು ವರ್ಷಗಳಿಂದ ಸೇವೆ ಸಲ್ಲಿಸಿದವರು. ಹಿರಿಯ ಪತ್ರಕರ್ತರುಗಳಾದ Ravi belagere, Udaya Marakini , Girish Rao Hatwar (ಜೋಗಿ ) ಎಲ್ಲರ ಬಗ್ಗೆ ಹೇಳ್ತಾ ಇರ್ತಾರೆ. ಅದು ಸಮಯ- ಸಂದರ್ಭಕ್ಕೆ ಅನುಗುಣವಾಗಿ,ಸಾಕಷ್ಟು ಬಾರಿ ಆ ಕಾಲದಲ್ಲಿನ ಪತ್ರಕರ್ತರ ಪರಿಸ್ಥಿತಿಗಳ ಬಗ್ಗೆ,ಹೀಗೆ  ಜೊತೆಜೊತೆಗೆ ಸಿನಿಮಾದವರ ಅನೇಕ ಕಥೆಗಳು... !! ಚಿತ್ರ-ಪ್ರಿಯಾಂಕ ಪತ್ರಿಕೆ ಬಿಟ್ಟ ಬಳಿಕವು ನಾನು ತುಂಗಾ ಮೇಡಂ ಪತ್ರಿಕೆಗೆ ಬರೆಯಲೇ ಬೇಕಿತ್ತು. ಮತ್ತೊಂದು ಸಂಗತಿ ನಾನು ಮೇಡಂ ಮನೆಗೆ ಹೋದಾಗ ತಪ್ಪದೆ ನನಗೆ ಇಡ್ಲಿ ಅಥವಾ ತುಮಕೂರಿನ ಅಕ್ಕಿ ರೊಟ್ಟಿ  ಮಾಡೇ ಇಡ್ತಾರೆ. ರಂಗಕರ್ಮಿ -ಚಿಂತಕ ಹಿರಿಮತ್ತು ಕಿರಿತೆರೆಯ ಕಲಾವಿದ ನಾಗರಾಜ್ ಮೂರ್ತಿ ಮೇಡಂ ಪತಿ. ಹೋದಾಗ ಹೇಳೋ  ಮಾತು ನಮಸ್ತೆ    ಸರ್  ಅಷ್ಟೇ :-) ಆ ಬಳಿಕ  ಹರಟಲು ಮ್ಯಾಡಂ ಮತ್ತು ರಾಜಿ ಆಂಟಿ ಜೊತೆ ಕೂತರೆ, ಸಂಜೆ ಮನೆಗೆ ಹೋಗುವಷ್ಟರಲ್ಲಿ   ತಿಂಡಿ-ಊಟ ಅದು ಇದು ಅಂತ ಸೇರಿ ಹೊಟ್ಟೆ ಬಿರಿಸಿಕೊಂಡು ದಣಿವಾಗಿಸಿಕೊಳ್ಳುವ ಸಂಭ್ರಮ.  ಆದರೆ ಸುಮಾರು ಆರು ತಿಂಗಳು ಚಿತ್ರ ಪತ್ರಿಕೆಗೆ ಬರೆಯದೆ ಸುಮ್ಮನಾದೆ ಕಾರಣಾಂತರಗಳಿಂದ. ಈಗ ಮತ್ತೆ  ಬರೆಯುತ್ತಿದ್ದೇನೆ! ಅದಕ್ಕೆಂದು ಈ ಹೆಣ್ಣು ಮಗಳನ್ನು  ಸಂದರ್ಶಿಸಿದ್ದು...ಆಗ ಹೀಗೆಲ್ಲ ಆಯ್ತು !!   

No comments:

Post a Comment