Monday, March 24, 2014

ಹೇಳಿರ ಬಹುದೇನೋ?


ಅವತ್ತು ಆತ ಚಾಟ್ ಮಾಡುವ ಹೇಳಿದ ಸಂಗತಿ ನನಗೆ ಸಿಕ್ಕಾಪಟ್ಟೆ ನಗು ತರಿಸಿತ್ತು. ಕಾರಣ ಇಷ್ಟೇ ಒಮ್ಮೆ  ನನ್ನ ಇನ್ನೊಂದು ಬ್ಲಾಗ್ ವಾಸುದೇವ ದಲ್ಲಿ  ಪ್ರಕಟಿಸಿದ್ದ ಪೋಸ್ಟ್ ಬಗ್ಗೆ  ಗೆಳೆಯ ಅರಕಲ ಗೂಡು ಜಯಕುಮಾರ್ ತೀವ್ರವಾಗಿ ಪ್ರತಿಕ್ರಿಯಿಸಿದ್ದರಂತೆ. ಆತ ಕಳೆದ ಆರುವರ್ಷಗಳಿಂದ ನನ್ನ ಬ್ಲಾಗ್ ವಾಸುದೇವ ನ್ನು ಓದುತ್ತ ಬಂದಿದ್ದಾರೆ. ಅದಾಗಿ ಸ್ವಲ್ಪ ಕಾಲದ ಬಳಿಕ ನಾವಿಬ್ಬರು ಫೇಸ್ ಬುಕ್ ಫ್ರೆಂಡ್ಸ್ ಆದೆವು.. ಒಳ್ಳೆ ಬಾಂಧವ್ಯ ಇಬ್ಬರಲ್ಲೂ . ಆತ ಸಹ ಪತ್ರಕರ್ತ.. ಆದರೆ ಎಲ್ಲಿಯೂ ಮತ್ತು ಎಂದಿಗೂ ನಾವಿಬ್ಬರು   ಚಾಟ್ ಮಾಡುವ ನಮ್ಮ ವೃತ್ತಿಯ ಬಗ್ಗೆ ಮಾತಾಡಿಲ್ಲ. ಹಾಸನದಲ್ಲಿನ ಅನೇಕ ಸಂಗತಿಗಳನ್ನು, ಅರಕಲಗೂಡಿನ ಅನೇಕ ಸಂಗತಿಗಳನ್ನು ಚಾಟಿನ ಮುಖಾಂತರ ಆಡುವ ಪದ್ಧತಿ ಇದೆ. ಹೀಗೆ ಆತ ಚಾಟ್ ಮಾಡುವಾಗ  ಒಂದೊಮ್ಮೆ ನನ್ನ ಪೋಸ್ಟನ್ನು ಕಟುವಾಗಿ ಟೀಕಿಸಿದ್ದೆ ಎಂದು ಹೇಳಿ ಸಾರಿ ಕೇಳಿದ್ದ ಪುಣ್ಯಾತ್ಮ ! ತಡೆಯಲಾದಷ್ಟು ನಗೆ ಬಂದಿತ್ತು. ಅತಿ ಹೆಚ್ಚು ಮೌನಿ, ಅತಿಯಾದ ಭಾವುಕ. ಆತನ ಜೊತೆ ನಾ ಮಾತಾಡೆ ಇಲ್ಲ ಆದರು ಮಾಡಿದ ಚಾಟ್ನಿಂದ ಮನಸ್ಥಿತಿ   ಅರ್ಥ ಆಗುತ್ತಲ್ಲ  .. ಒಂದು ಒಂದೆರಡು ವಾಕ್ಯಕ್ಕೊಂದು sorry ಇರಲೇ ಬೇಕು.
ಇತ್ತೀಚಿಗೆ   ಚಾಟ್ ಮಾಡುವಾಗ ಜಿವಿಜೆ (ಆತ ನನ್ನ ಸಂಬೋಧಿಸಿವುದು ಹೀಗೆ )  ನಿಮಗೊಂದು ಆಶ್ಚರ್ಯಕರ ಸಂಗತಿ ಹೇಳ ಬೇಕಿದೆ ಅಂದ್ರು . ರಾತ್ರಿ ಸುಮಾರು 9 :30  ಸಮಯ .. ನಾನು ಮಾರನೆಯ ದಿನಕ್ಕೆ ಬೇಕಾದ ರೋಚಕ ಸಿನಿಮಾ ಸುದ್ದಿಗಳನ್ನು ಒಂದು ಕಡೆ ಸೇರಿಸಿ ಇಡ್ತಾ ಇದ್ದೆ. ಹೇಳಿ ಅಂದೇ.. ಆತ ತನ್ನ  ಬದುಕಿನಲ್ಲಿ   ಕಳಚಿ ಹೋಗಿದ್ದ ಕೊಂಡಿಯೊಂದನ್ನು ಸೇರಿಸಿದ್ದರು. ಹೈದರಾಬಾದಿನ ಒಬ್ಬಾಕೆ ತನ್ನ ಇವರಿಗೆ ಮೆಸೇಜ್ ಬಾಕ್ಸ್ ನಲ್ಲಿ ಒಂದು ಮೆಸೇಜ್ ಹಾಕಿದ್ದರು. ಆಕೆ ಹೈದರಾಬಾದ್ ಹೆಣ್ಣು ಮಗಳಾಗಿದ್ದರು, ಆಕೆ ಕುಟುಂಬ ದಲ್ಲಿ ಕೊಂಡಿಗಳು ಕಳಚಿದ್ದವು. ಆ ಕಳಚಿದ ಕೊಂಡಿ ಹಾಸನದ ಹಳ್ಳಿಯಲ್ಲಿ ಇದೆ ಎನ್ನುವ ಮಾಹಿತಿ ಆಕೆಗಿತ್ತು. ಆ ಗೃಹಿಣಿಗೆ ಅರಕಲಗೂಡು ಅನ್ನುವ ಹೆಸರು ನೋಡಿ ಆ ಹೆಸರಲ್ಲಿ ಇರುವವರಿಗೆ ಮೆಸೇಜ್ ಮಾಡಿದ್ದರು. ಆಗ ಈ ಪತ್ರಕರ್ತ ಮಿತ್ರ ಆಕೆಗಾಗಿ ಸಹಾಯಿಸಲು ಸಿದ್ಧ ಆದಾಗ ಆ ಹೆಣ್ಣುಮಗಳು ಹೇಳಿದಂತಹ ಕುಟುಂಬದ ತುಣುಕು ಸಿಕ್ಕು , ಅವರೀಗ   ಒಂದಾಗಿದ್ದಾರೆ.ಇವೆಲ್ಲದರ ಬಗ್ಗೆ ಹೇಳುತ್ತಾ ಆ ಕುಟುಂಬಗಳನ್ನು ಒಂದು ಮಾಡಲು ಪಟ್ಟ ಪಡಪಾಟಲಿನ   ಬಗ್ಗೆ ತಿಳಿಸುತ್ತಾ ಹೋದರು.. ಅದರ ಜೊತೆಗೆ ಆ ಹೆಣ್ಣುಮಗಳು ಫೇಸ್ ಬುಕ್ ನಿಂದ  ಈಕೆಗೆ ನನ್ನ ಮಿತ್ರ ಸಿಕ್ಕಿದ್ದಲ್ಲದೆ ಎಂದೋ ಕಳೆದು ಹೋಗಿದ್ದ ಮೂಲವು ಸಹ ಆಕೆಗೆ ದೊರಕಿತ್ತು... ಮೂಲಗಳನ್ನು ಹುಡುಕುತ್ತ ಹೊರಟರೆ ನಮಗೆ ಒಳ್ಳೆಯ ಅತ್ಯಂತ ಸಿಕ್ಕರೆ   ಮತ್ತು ಆ ಮೂಲ ಹುಡುಕಲು ಜಯಕುಮಾರ್ ರಂತಹ ಒಳ್ಳೆಯ ಮನದವರು ದೊರೆತರೆ ಎಲ್ಲವು ಶುಭಾಂತ್ಯ.. ! ಇಲ್ಲದೆ ಇದ್ದರೆ  ಕೋಳಿ ತಿಪ್ಪೆ ಕೆದಕಿದಂತೆ ಆಗುತ್ತದೆ... ನದಿ ಮೂಲ-ನಮ್ಮಗಳ ಮೂಲ ಹುಡುಕ ಬಾರದು ಅಂತಾರೆ ತಿಳಿದೋರು.. ಅಂತ್ಯದ  ಬಗ್ಗೆ ಯಾರಿಗೂ ಅರಿವಿಲ್ಲದ ಕಾರಣ ಹೀಗೆ ಹೇಳಿರ ಬಹುದೇನೋ? 

1 comment: