
ಮಹಾದೇವಿ ಅವರ ತಂಗಿ ಪ್ರಾಣಿ ಪ್ರಿಯೆ.ಆಕೆಯ ಮನೆಯಲ್ಲಿ ಅನೇಕ ಸಾಕು ಪ್ರಾಣಿಗಳು ಇದ್ದವು.ಮಾತಿನಲ್ಲಿ ಚತುರೆ,ಒಮ್ಮೆ ಮಹಾದೇವಿ ಅವರು ತಂಗಿ ಮನೆಗೆ ಹೋದಾಗ ಆಕೆ ನೀನೂ ಕೇವಲ ಬರಹದಲ್ಲಿ ಪ್ರಾಣಿಗಳ ಮೇಲೆ ಪ್ರೀತಿ ತೋರುತ್ತಿಯ..ನಮ್ಮ ಮನೆಯಲ್ಲಿರುವ ಹಸು ತೆಗೆದುಕೊಂಡು ಹೋಗಿ ಸಾಕು.ಅದರಲ್ಲಿ ಸಿಗುವ ಆನಂದ ಅನುಭವಿಸು !ಅಂತ ಪ್ರೀತಿಯಿಂದ ಒತ್ತಾಯ ಮಾಡಿ ಬಹುಮಾನವಾಗಿ ಒಂದು ಹಸು ಕೊಟ್ಟರಂತೆ.ಇವರು ಆರೈಕೆ ಮಾಡುತ್ತಾ ಅದರ ಆನಂದ ಅನುಭವಿಸಲು ಆರಂಭಿಸಿದರು.ಈ ಹಸು ನೋಡಲು ತುಂಬಾ ಸುಂದರ ಆಗಿತ್ತಂತೆ,ಸರಿ ಅದಕ್ಕೆ ಅವರು ಗೌರ ಅನ್ನುವ ಹೆಸರು ನೀಡಿದರು.ಈ ಗೌರ ಸಹ ಹೇರಳವಾಗಿ ಹಾಲು ನೀಡಲು ಆರಂಭಿಸಿತು.ಆ ಹಾಲು ಮನೆ ಮಂದಿಗೆಲ್ಲ ಸಾಕಾಗಿ ಬೆಕ್ಕು,ನಾಯಿಗಳಿಗೂ ಹಾಕುವಷ್ಟು ಹಾಲು ಉತ್ಪತ್ತಿ ಆಗುತ್ತಿತ್ತು.ಇತರ ಪ್ರಾಣಿಗಳು ತನ್ನ ಹಾಲು ಕುಡಿಯುವುದನ್ನು ಕಂಡಾಗ ಆಕೆಗೆ ಧನ್ಯತಾಭಾವ.ಆ ಊರಲ್ಲಿ ಇದ್ದ ಹಾಲು ಮಾರುವವ ಮಹಾದೇವಿಯವರ ಬಳಿ ತನ್ನ ಬಳಿ ಹಾಲು ಕೊಲ್ಲದೆ ಇರುವುದಕ್ಕೆ ಬೇಸರ ವ್ಯಕ್ತ ಪಡಿಸಿದ.ಆಗ ಈಕೆ ಇನ್ನುಮುಂದೆ ಗೌರಳ ಹಾಲು ನೀನೆ ಕರಿ,ನಮಗಾಗಿ ಉಳಿದದ್ದು ನೀನೂ ಕೊಂಡೊಯ್ಯಿ ಎಂದರಂತೆ.ಅವನು ಬಂದ ಸ್ವಲ್ಪ ದಿನಗಳಾದ ಮೇಲೆ ಗೌರ ಸಣ್ಣಗೆ ಆಗಲು ಆರಂಭಾ ಆಯಿತು.ವೈದ್ಯರ ಬಳಿ ತಪಾಸಣೆ ಮಾಡಿಸಿದಾಗ ರಿಪೋರ್ಟ್ ನಲ್ಲಿ ಹಸುವಿನ ಕರುಳಲ್ಲಿ ಸುಜಿಗಳು ಇರುವುದು ಕಂಡು ಬಂದಿತು.ಅವು ಹೇಗೆ ಸೇರಿರ ಬಹುದು ಎಂದು ತಿಳಿಯದೆ ಗೊಂದಲಕ್ಕೆ ಈಡಾದರು ಮಹಾದೇವಿ.ವೈದ್ಯರ ಉಹೆ ಅನ್ವಯ ಅವುಗಳನ್ನು ಬೆಲ್ಲದ ಉಂಡೆಯಲ್ಲಿ ಸೇರಿಸಿ ಹಸುವಿಗೆ ತಿನ್ನಿಸಲಾಗಿತ್ತು. ಹೀಗೆ ಅದು ಕರುಳಲ್ಲಿ ಸೇರಿತ್ತು.ಸ್ವಲ್ಪ ದಿನಕ್ಕೆ ಹೃದಯಕ್ಕೆ ಸೇರುತ್ತದೆ ಎಂದು ವೈದ್ಯರು ತಿಳಿಸಿ,ಗೌರಳ ಸಾವು ನಿಶ್ಚಿತ ಎಂದು ತಿಳಿಸಿದಂತೆ.ಈ ದುಷ್ಕೃತ್ಯ ಮಾಡಿದವ ಆ ಹಾಲು ಮಾರುವವ ಎನ್ನುವ ಅಂಶ ಈಕೆಗೆ ಮನದಟ್ಟಾಯಿತು.ಸ್ವಲ್ಪ ದಿನಗಳಾದ ಮೇಲೆ ಆ ಹಸು ಸತ್ತು ಹೋಯಿತು..ಕೊನೆಯಲ್ಲಿ ಲೇಖಕಿ ಹೇಳುವುದು ಕೃಷ್ಣ ಹುಟ್ಟಿದ ಯಾದವರ ವಂಶದಲ್ಲಿ ಹುಟ್ಟಿದ ಈತ ಹಸುವಿನ ಸಾವಿಗೆ ಕಾರಣ ಆದನಲ್ಲ..!ಅವರು ವ್ಯಥೆ ಹೊಂದಿದಂತೆ ನಾವು ಈಗ...!!
No comments:
Post a Comment