Saturday, January 17, 2009

ಯಾಕೆ ಹೀಗೆ..?

ಇತ್ತೀಚೆಗೆ ಬ್ಲಾಗ್ ಒಂದರಲ್ಲಿ ಓದಿದೆ.ಅದರಲ್ಲಿ ಆತ ಹಿರಿಯ ಪತ್ರಕರ್ತರ ಇತಿಹಾಸ ಕೆದಕಿ ಜನಗಳಿಗೆ ತೋರುವ ಪ್ರಯತ್ನ ಮಾಡಿದ್ದರು.ಅದೇ ಬ್ಲಾಗ್ನಲ್ಲಿ ಈ ವಿಷಯಕ್ಕೆ ಸಂಬಂಧ ಪಟ್ಟಂತೆ ಓರ್ವ ಓದುಗರು ಪತ್ರಕರ್ತರು ಉತ್ತರ ಕೊಡುವ ಅವಶ್ಯಕತೆ ಇಲ್ಲ ಎನ್ನುವಂತೆ ಆ ಬರೆದಾತನಿಗೆ ಉತ್ತರ ಕೊಟ್ಟಿದ್ದರು.ಆ ಬ್ಲಾಗ್ ಕತೃ ಬರೆಯುವ ರಭಸದಲ್ಲಿ ಬಳ್ಳಾರಿಯ ಜನರಿಗೆ ಕನ್ನಡ ಅರೆಬರೆ ಗೊತ್ತು ಎನ್ನುವ ಮೆಸೇಜ್ ಕೊಟ್ಟಿದ್ದರು.ನನಗೆ ಆಶ್ಚರ್ಯ ಆಗಿದ್ದು ಏನೆಂದರೆ,ಆತ ಒಬ್ಬ ವ್ಯಕ್ತಿ ಮೇಲೆ ದ್ವೇಷ ಸಾರಲು ಹೊರಟಿದ್ದಾರೋ ,ಭಾಷೆ ಅಥವಾ ಆ ಪ್ರಾಂತ್ಯದಲ್ಲಿನ ನಿವಾಸಿಗಳ ಬಗ್ಗೆ ಕೋಪ ತೀರಿಸಲು ಹೊರಟಿದ್ದಾರೋ ... ಅಂತು ಅದರ ಒಟ್ಟು ಪರಿಣಾಮ ಇದೊಂದು ವಯುಕ್ತಿಕ ದ್ವೇಷದ ಪರಮಾವಧಿ ಅಂತ ಅನ್ನ ಬಹುದು,ಹಾಗಾದರೆ ಈತನ ಪ್ರಕಾರ ಕೋಲಾರದವರು ಸಹ ತೆಲಗು ಮುದ್ದು ಬಿಡ್ಡಲುಅಂತ ಆಯ್ತಲ್ಲ.ನಮ್ಮ ರಾಜ್ಯ ಭೌಗೋಳಿಕವಾಗಿ ಯಾವ ರೀತಿಯಲ್ಲಿ ನಿರ್ಮಿತ ಆಗಿದೆ ಅಂತ ನಿಮಗೆ ಗೊತ್ತು,ಇಲ್ಲಿ ಕನ್ನಡ ಭಾಷೆ ಜೊತೆ ಜೊತೆಗೆ ತಮಿಳು,ತೆಲಗು,ಮರಾಠಿ,ಉರ್ದು,ಮಲಯಾಳಂ... ಅಲ್ಲದೆ ಹಿಂದಿ... ಹೀಗೆ ಹಲವಾರು ಭಾಷೆಗಳು ಗಡಿಯ ಕಾರಣದಿಂದ ಅಲ್ಲದೆ,ವ್ಯಾಪಾರದ ಕಾರಣದಿಂದಲೂ ತನ್ನ ಪ್ರಭಾವ ಬೀರಿದೆ .ಅದನ್ನು ಅರಿತು ಇದು ಇಷ್ಟಕ್ಕೆ ಸೀಮಿತ ಅಂತ ನಿರ್ಧಾರ ಮಾಡುವ ಹಕ್ಕು ವಯುಕ್ತಿಕವಾಗಿ ಯಾರಿಗೂ ಇಲ್ಲ.ಗಡಿಯಲ್ಲಿ ಕನ್ನಡ ಇಲ್ಲ ಎನ್ನುವ ವಾದ ಪುಷ್ಟಿಕರಿಸುವ ಪ್ರಯತ್ನ ಮಾಡುತ್ತಿದ್ದರೋ ಅಥವಾ ವಯುಕ್ತಿಕ ಕಾರಣ ಮುಂದಿಟ್ಟುಕೊಂಡು ಈ ರೀತಿ ಬರೆಯುತ್ತಾರೋ ಆ ಭಗವಂತ ಬಲ್ಲ.ಇತ್ತೀಚೆಗೆ ಶಶಿಧರ್ ಭಟ್ಟರು ತಮ್ಮ ಬ್ಲಾಗ್ ಕುಮ್ರಿಯಲ್ಲಿ ಯಾವುದೋ ಒಂದು ಬ್ಲಾಗ್ ತಮ್ಮ ಬಗ್ಗೆ ಕೆಟ್ಟದಾಗಿ (ಈ ಪದ ಬಳಸ ಬಹುದಾ?) ಬರೆದ ಬಗ್ಗೆ ಹೇಳಿದ್ದರು ,ಆ ವ್ಯಕ್ತಿಯ ದೃಷ್ಟಿಕೋನ ಸರಿಯಿಲ್ಲ ಎನ್ನುವುದಕ್ಕೆ ತಮ್ಮದೇ ಆದ ರೀತಿಯಲ್ಲಿ ಸಮರ್ಥನೆ ಮಾಡಿಕೊಂಡಿದ್ದರು.ಆ ವಿಧಾನ ಒಂದು ಅರ್ಥದಲ್ಲಿ ಸರಿ,ಕೆಲವು ಬಾರಿ ನಮ್ಮ ಬಗ್ಗೆ ನಾವೇ ಹೇಳ ಬೇಕಾಗಿ ಬರುತ್ತದೆ.ಅಂತಹ ಬ್ಲಾಗರ್ ಗೆ ಅದರಿಂದ ಪ್ರಯೋಜನ ಆಗದೆ ಹೋದರು ಕನಿಷ್ಠ ಅವರನ್ನು ಗೌರವಿಸುವ ಮಂದಿಗೆ ಸಮಾಧಾನ ಆಗುತ್ತದೆ.ಪತ್ರಿಕೆ ಒಂದರಲ್ಲಿ ವಿಶ್ವೇಶ್ವರ ಭಟ್ ಅವ್ರಿಗೆ ತರ್ಜುಮೆ ಗಂಧ ಗಾಳಿ ಗೊತ್ತಿಲ್ಲ,ಅವರ ಪತ್ರಿಕೆ ಸಧ್ಯದಲ್ಲೇ ಪೀತ ಪತ್ರಿಕೆ ಆಗುತ್ತೆ ಅನ್ನುವ ಸುದ್ದಿ ಓದಿ ನಾನು ಅಲ್ಲಿ ಕೆಲಸ ಮಾಡುವ ಗೆಳೆಯನನ್ನು ಕೇಳಿದೆ.ಆತ ನಕ್ಕು ನೀವು ಭಟ್ಟರು ಬರೆಯೋದನ್ನು ಕಣ್ಣಾರೆ ಕಂಡು ಈ ರೀತಿ ಪ್ರಶ್ನೆ ಕೇಳ್ತಾ ಇದ್ದೀರಲ್ಲ ಎಂದಿದ್ದಲ್ಲದೆ,ಇದು ನಮ್ಮ ಪತ್ರಿಕೆಯಲ್ಲಿ ಕೆಲಸ ಮಾಡುತ್ತಿರುವ ಕೆಲವು ಕಿಡಿಗೇಡಿ ಪತ್ರಕರ್ತರ ಬ್ಲಾಗ್ ನಲ್ಲಿ ಪ್ರಕಟ ಆಗಿದ್ದ ವಿಷಯ,ಅದನ್ನು ಅವ್ರು ನಿಜ ಅಂತ ತಿಳಿದು ಪ್ರಕಟ ಮಾಡಿದ್ದಾರೆ ಸಧ್ಯದಲ್ಲೇ ಅವ್ರು ಯಾರು ಅಂತ ಗೊತ್ತಾಗುತ್ತೆ ಬಿಡಿ ಅಂತ ಅಂದರು..ಮುಂದೆ ಯಾವ ಪತ್ರಿಕೆ ಏನು ಆಗುತ್ತದೆಯೋ ಗೊತ್ತಿಲ್ಲ,ಆದರೆ ಬ್ಲಾಗ್ ಗಳಲ್ಲಿ ಈ ರೀತಿಯ ವಾರ್ತೆಗಳಿಗೆ ಕೊರತೆ ಇಲ್ಲ ಬಿಡಿ!!

No comments:

Post a Comment