Saturday, January 24, 2009

ಸಾವು..ಸದಾ ಕಾಡುತ್ತೆ!!

ನಿನ್ನೆ ಸಿರ್ಸಿ ಸರ್ಕಲ್ ಸಮೀಪದ ರೇಲ್ವೆ ಕಂಬಿ ಬಳಿ ಇರುವ ಕಾಪೋಂಡ್ ಬಳಿ ಹೆಣವೊಂದು ಬಿದ್ದಿತ್ತು.ಅಂತಹ ಅನಾಥ ಹೆಣಗಳು ಮಹಾನಗರಗಳಲ್ಲಿ ಸಾಮಾನ್ಯ.ಆದರೆ ಯಾಕೋ ಗೊತ್ತಿಲ್ಲದಂತೆ ಮನಸ್ಸು ವಿಹ್ವಲ ಆಯ್ತು.ಬರುವಾಗ ಬೆತ್ತಲೆ ಹೋಗುವಾಗ ಬೆತ್ತಲೆ.. ! ಅಂತ ನಾರ್ಮಲ್ ಆಗಿ ಹೇಳಿ ಸುಮ್ಮನಾಗುವ ಮನಸ್ಥಿಯಲ್ಲಿ ನಾನು ಇರೋಕೆ ಸಾಧ್ಯ ಆಗಲಿಲ್ಲ..ಸಾವಿನ ಬಗ್ಗೆ ನನಗೆ ಹೆದರಿಕೆ ಇಲ್ಲ,ಅತಿ ಕುತೂಹಲ ಘಟ್ಟ ಅಂತ ಭಾವಿಸ್ತೀನಿ.ಗೊತ್ತಿಲ್ಲ ಈ ರೀತಿಯ ಮನಸ್ಥಿತಿಗೆ ಕಾರಣ ಏನು ಅಂತ.ಪ್ರಾಯಶಃ ನನ್ನ ಹತ್ತಿರ ಹಣ,ಆಸ್ತಿ,ಹೆಸರು ಇಲ್ಲದ ಇರುವುದು ಇದಕ್ಕೆ ಕಾರಣ ಆಗಿರ ಬಹುದೇನೋ.ಆದರೆ ಆ ಅನಾಥ ಹೆಣ ಯಾಕೋ ನನ್ನ ಮನಸ್ಸಿನಲ್ಲಿ ಉಳಿದು ಹೋಯಿತು?ನಾವು ಹಲವು -ಕೆಲವುಗಳಿಗಾಗಿ ಸದಾ ಚಿಂತಿಸುತ್ತಿರುತ್ತೇವೆ.ಅದು ಸಿಕ್ಕರೂ,ಸಿಗದೇ ಇದ್ದರು ಸಾವು ತನ್ನ ಸಮಯಕ್ಕೆ ತಾನು ಬಂದು ತಮ್ಮನ್ನು ಕರೆದುಕೊಂಡು ಹೋಗಿಬಿಡುತ್ತದೆ. ಕೆಲವರು ಬದುಕಲ್ಲಿ ಎಲ್ಲ ಪಡೆದಿರುತ್ತಾರೆ ಆದರೆ ಸಾಯುವ ಕೊನೆ ಗಳಿಗೆಯಲ್ಲಿ ಒಂದು ಹನಿ ನೀರು ಹಾಕಲು ಒಬ್ಬರು ಇರುವುದಿಲ್ಲ.ಕೆಲವರು ಬದುಕಲ್ಲಿ ಎಲ್ಲವನ್ನು ಕಳೆದುಕೊಂಡಿರುತ್ತಾರೆ ಸಾವಿನ ಮೂಲಕ ಎಲ್ಲರನ್ನು ಪಡೆದು ಕೊಳ್ಳುತ್ತಾರೆ.ವಿಚಿತ್ರ! ಒಂದು ಸರ್ತಿ ಪರಿಚಿತ ಹೆಣ್ಣು ಮಗಳು ತಾನು ಸೀಮೆ ಎಣ್ಣೆ ಸುರಿದು ಕೊಂಡು ಬೆಂಕಿ ಹಚ್ಚಿಕೊಂಡು ಸತ್ತು ಹೋದಳು.. ಕಾರಣ ಯಾರಿಗೂ ಗೊತ್ತಿರಲಿಲ್ಲ.ಒಂದು ಸರ್ತಿ ಆ ಹೆಣ್ಣುಮಗಳ ತಾಯಿ ಇಂತಹುದೇ ನೋವು ಉಣ್ಣುತ್ತಿದ್ದ ತಾಯಿ ಮತ್ತೊಬ್ಬ ತಾಯಿ ಬಳಿ ಅಕ್ಕ ನಿನ್ನ ಮಗಳ ಸಾವಿಗೆ ಒಂದು ಕಾರಣ ಇದೆ ಆದರೆ ನನ್ನ ಮಗಳು ಕಾರಣ ಹೇಳದೆ ಸತ್ತಳು.. ಇದು ನಾನು ಸಾಯುವ ತನಕ ಕೊರಗುವಂತೆ ಮಾಡುತ್ತದೆ ಅಂತ ಅತ್ತಿದ್ದರು.ಕೆಲವು ಸರ್ತಿ ಕೋಪವು ಅಂತಹ ಸಾವಿಗೆ ಕಾರಣ ಆಗುತ್ತದೆ ಅಂತ ಕಾಣುತ್ತದೆ.ಆದರೆ ಎಲ್ಲದಕ್ಕಿಂತ ಬದುಕಿನ ಬಗ್ಗೆ ಅತಿ ಆಸೆ ಇಟ್ಕೊಂಡು ವಿದೇಶಗಳಿಗೆ ಹೋಗಿ ಸಾಧನೆ ಮಾಡುವ ಆಸೆ ಹೊಂದಿರುತ್ತಾರಲ್ಲ ಅಂತಹವರು ಕೊಲೆ ಆಗಿ,ಅದು ಅಬ್ಬೇಪಾರಿ ಹೆಣವಾಗಿ ಎಂದೋ ತಾಯಿ-ತಂದೆ ಸಂಬಂಧಿಕರಿಗೆ ತಿಳಿಯುತ್ತದಲ್ಲ ಅದರಷ್ಟು ದು:ಖಕರ ಸಂಗತಿ ಮತ್ತೊಂದಿಲ್ಲ.ಅಂತಹ ನ್ಯೂಸ್ ಓದಿದರೆ ನನಗೆ ನೋವು ತಡಿಯೋಕೆ ಆಗೋದಿಲ್ಲ.ಬದುಕಿನೊಂದಿಗೆ ಸಾವು ಇದ್ದೆ ಇರುತ್ತದೆ,ನಾವು ನಮ್ಮ ಟೈಮ್ ಬರುವ ತನಕ ಕಾಯುತ್ತ (ಅರಿವಿಲ್ಲದಂತೆ ) ಆ ಸಂಗತಿಯನ್ನು ಮರೆತು ಮುಂದೆ ಸಾಗ್ತಾನೆ ಇರ್ತಿವಿ.ಇದೆ ಜೀವನ ಅಲ್ವ!

No comments:

Post a Comment