Monday, December 23, 2013

ಕಾಣದ ಕಡಲಿಗೆ ಹಂಬಲಿಸಿದೆ ಮನ


ಕಾಣದ ಕಡಲಿಗೆ ಹಂಬಲಿಸಿದೆ ಮನ ಕಾಣಬಲ್ಲೆನೆ ಒಂದು ದಿನ ಕಡಲನು ಸೇರ ಬಲ್ಲೆನೆ ಒಂದು ದಿನ!! ನೀನು ಮುಗಿಲು ನಾನು ನೆಲ!! ಯಾವುದೀ ಪ್ರವಾಹವೂ !! ಇಂತಹ ಇನ್ನೂ ಅನೇಕ ಭಾವಗೀತೆಗಳನ್ನು ರಚಿಸಿಕೊಟ್ಟ ರಾಷ್ಟ್ರಕವಿಯ ಹೆಸರು ಅಮರವಾಗಲಿ. ಅವರ ಆತ್ಮಕ್ಕೆ ಶಾಂತಿ ದೊರೆಯಲಿ!!
ಭಾವಗೀತೆಯ ಪ್ರಿಯರಿಗೆ ಈ ಹಾಡು ತುಂಬಾ ಆಪ್ತ.  ವರ್ಷವೊಂದರ ಡಿಸೆಂಬರ್ ತಿಂಗಳಲ್ಲಿ ಹಿರಿಯ ಹಿನ್ನೆಲೆ ಗಾಯಕ ಸಿ.ಅಶ್ವಥ್ ಅವರು ಕಣ್ಣು ಮುಚ್ಚಿದಾಗ ಜಿಎಸ್ಎಸ್ ಅವರ ಈ ಹಾಡನ್ನು ಅಶ್ವಥ್ ಅವರನ್ನು ಇಷ್ಟ ಪಡುವ ಸುಗುಮ ಸಂಗೀತ ಪ್ರಿಯರು ಗುಣಗುಣಿಸಿ ಅಶ್ರುತರ್ಪಣ ಬೀರಿದ್ದರು. ಇಂತಹ ಭವ್ಯವಾದ ಕವನ ರಚನೆಯ ಜಿಎಸ್ಎಸ್ ಕಾಣದ ಲೋಕಕ್ಕೆ ಪಯಣ ಬೆಳೆಸಿದ್ದಾರೆ.  ಕಾಣದ ಕಡಲಿಗೆ ಹಂಬಲಿಸಿ ಅಂತಿಮವಾಗಿ ಅಲ್ಲಿಗೆ ಹೊರಟ ಜೀವಕ್ಕೆ ನಮೋನ್ನಮಃ
ನನಗೆ ಇವರ ಅತಿಯಾದ ಆಪ್ತವಾದ ಹಾಡು ಎದೆ ತುಂಬಿ ಹಾಡಿದೆನು... ಹಾಡಿನ ಬಗ್ಗೆ ಅದರಲ್ಲೂ, ಭಾವಗೀತೆಗಳ ಬಗ್ಗೆ ವಿಶೇಷವಾದ ಒಲವನ್ನು ಹೊಂದಿರುವ ಸಾಹಿತ್ಯ ಪ್ರಿಯರಲ್ಲಿ ನಾನು ಒಬ್ಬಳು. ತುಂಬಾ ಭಾವುಕತೆಯಿಂದ ಕವಿಗಳ ರಚನೆ ಹಾಡುವುದು ದಿನದ ಒಂದು ಭಾಗ. ಅತಿ ಆಪ್ತ ಅನ್ನಿಸುವ ಕೆಲಸ ಅದಾಗಿತ್ತು. ಆಗ ನಾನು ಹೆಚ್ಚು ಗುನುಗುತ್ತಿದ್ದ ಹಾಡು ಎದೆತುಂಬಿ.. ಮತ್ತೊಂದು ಇಷ್ಟ ಆಗುತ್ತಿದ್ದ ರಚನೆ ಉಡುಗಣ ವೇಷ್ಟಿತ.. ಅದರ ಭಾವಲಹರಿ ತುಂಬಾ ಇಷ್ಟವಾಗಿತ್ತು. ಈಗಲೂ ತುಂಬಾ ಇಷ್ಟ.ರಾಷ್ಟ್ರ ಕವಿ, ಸಾಮಾನ್ಯರ ಆಪ್ತ ಕವಿ ಜಿ ಎಸ್ ಎಸ್ ಅವರಿಗೆ ಭಾವಪೂರ್ಣ ವಿದಾಯ..


ಒಂದಂತೂ ಸತ್ಯ ಪ್ರತಿಯೊಂದು ಜೀವವು ಕಾಣದ ಕಡಲಿನತ್ತ ಆಕರ್ಷಣೆ ಹೊಂದಿರುತ್ತದೆ.. ಆದರೆ ಅದನ್ನು ಸೇರಬೇಕಾದರೆ ಕಾಯಲೇ ಬೇಕು...ದಿನ ಸವಿಯಲೇ ಬೇಕು!! 


No comments:

Post a Comment