Saturday, August 29, 2009

ಹೆಚ್ಚು ಸೇಫ್ಟಿ

ಗಣೇಶ ಹಬ್ಬದ ದಿನ ಅಣ್ಣನ ಫ್ರೆಂಡ್ ಅವರ ಮಗಳು ಬಂದಿದ್ದರು.ಆ ಮಗು ಪ್ರಾಯಶ: ಆರನೇ ಕ್ಲಾಸ್ ಇರ ಬೇಕು.ಸಂಜೆ ಬಂದವಳ ಬಳಿ ಅಮ್ಮ ಹಾಡು ಹೇಳು ಮರಿ ಅಂತ ಅಂದ್ರು,ಆ ಮಗು ತಕ್ಷಣ ಜೋರಾಗಿ ಶ್ಲೋಕ, ಹೇಳಲು ಆರಂಭ ಮಾಡಿ ಬಿಟ್ಲು,ಇರುವ ಅರ್ಧ ಗಂಟೆಯಲ್ಲೇ ಅವಳು ಇದ್ದ ಬದ್ದ ಹಾಡು ,ತನಗೆ ಗೊತ್ತಿರುವ ಡ್ಯಾನ್ಸ್,ಎಲ್ಲವು ಮುಗಿದು ಹೋಯ್ತು.ತುಂಬ ಚುರುಕಾದ ಮಗು,ನಿನ್ ಹೆಸರೇನು ಮಗು ಅಂತ ಬಂದ ಸ್ವಲ್ಪ ಹೊತ್ತಿನಲ್ಲೇ ಕೇಳಿದ್ದರು ಅಮ್ಮ,ಅವಳು ಮಾಳವಿಕಾ ಅಂತ ಉತ್ತರ ಕೊಟ್ಟಿದ್ದಳು,ಅರ್ಧಗಂಟೆ ಆದ ಬಳಿಕ ಈ ಹೆಸರು ಇಟ್ಟುಕೊಂಡ ವರೆಲ್ಲರೂ ಬೋಲ್ಡ್ ಅಂಡ್ ಬ್ಯೂಟಿಫುಲ್ ಆಗಿರ್ತಾರಲ್ಲ ಅಂತ ಅನ್ನಿಸಿದ್ದು ಸತ್ಯ! ನನ್ನ ಹೆಸರಿನಲ್ಲಿ ಗೆಲುವಿದೆ,ಆದರೆ ನನಗೆ ಗೆಲುವು ಸಿಕ್ಕಿದ್ದು ತುಂಬಾ ಕಡಿಮೆ.ಸ್ನೇಹ,ಬಾಂಧವ್ಯ ಎಲ್ಲದರಲ್ಲೂ ಸೋಲು...ಸೋಲು....! ಅದಕ್ಕೆ ನಾನು ಈಗಂತೂ ಹೆಚ್ಚು ಬಾಂಧವ್ಯ,ಸ್ನೇಹಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಡಲ್ಲ.ಚಿಕ್ಕವಳಾಗಿದ್ದಾಗ ನಾನು ಸದಾ ಗಜಮುಖನೆ ಗಣಪತಿಯೇ ಅನ್ನುವ ಹಾಡು ಹೆಚ್ಚು ಹೇಳ್ತಾ ಇದ್ದೆ.ನಮ್ಮ ದೊಡ್ಡಮ್ಮ ಮಂಗಳೂರಲ್ಲಿ ಇದ್ದರು,ರಜೆ ಕಳೆಯಲು ಅಲ್ಲಿಗೆ ಹೋಗಿದ್ದೆ,ಆಗ ಕೇವಲ ನಾಲ್ಕು ವರ್ಷ,ಮಂಗಳೂರಿನಲ್ಲಿ ಬೊಂಬೆ ಹಬ್ಬ,ಅಲ್ಲಿ ಯಾರ ಮನೆಗೆ ಕರಿಯಲಿ ಹೋಗಿ ತಪ್ಪದೆ ಗಜಮುಖನೆ ಹೇಳಿ ಪಣ್ಯಾರ ತಗೊಂಡು ಬರ್ತಾ ಇದ್ದೆ,:) ನನ್ನ ಹಾಡು ಕೇಳೋಕೆ ತಪ್ಪದೆ ನನ್ನನ್ನು ಅರಿಸಿನ ಕುಂಕುಮಕ್ಕೆ ಕರೆಯೋರು.ಧ್ವನಿ ಪಕ್ಕ ಕೀರಲೂ ಅಂದ್ರೆ ಕೀರಲು! ಯಾರಿಗೂ ಕೇರ್ ಮಾಡದೆ ಹಾಡು ಹೇಳಿ ಬಿಸಾಕ್ತಾ ಇದ್ದೆ.ಬದುಕು ನನ್ನನು ಪ್ರೀತಿಸಲಿಲ್ಲ ಅಂದ್ರು ನಾನು ಎಂದಿಗೂ ಧೃತಿಗೆಡಲಿಲ್ಲ,ಪ್ರಾಯಶ: ನನ್ನ ಬಾಲ್ಯದ ಆ ಧೈರ್ಯದ ಗುಣ ಒಂದಂಶ ನನ್ನನ್ನು ಮುನ್ನಡೆಸ್ತಾ ಇದೆ ಅಂತ ಕಾಣುತ್ತೆ.ಎಂತಹ ದುಃಖದ ಪರಿಸ್ಥಿಯಲ್ಲೂ ಅಳಲ್ಲ.ಆ ಗುಣ ಕೆಲವರಿಗೆ ಮಾದರಿ ಆದರೆ,ಒಂದಷ್ಟು ಜನ ಅಹಂಕಾರಿ ಅನ್ನುವ ಅವಾರ್ಡ್ ಕೊಟ್ಟಿದ್ದಾರೆ,ಅಳುವುದಕ್ಕಿಂತ,ಅವಾರ್ಡ್ ತೆಗೆದುಕೊಳ್ಳುವುದು ಹೆಚ್ಚು ಸೇಫ್ಟಿ.ಇದು ನನ್ನ ಅನುಭವ.

No comments:

Post a Comment