Thursday, February 26, 2009

ದೃಷ್ಟಿಕೋನ

ಎಲ್ಲರಿಗು ಪ್ರಿಯವಾದ ದೇವರು ಕೃಷ್ಣ ಅಂತ ಕೆಲವರು ತುಂಬಾ ನಂಬ್ತಾರೆ ,ಅದು ಎಷ್ಟ ಮಟ್ಟಿಗೆ ಅಂತ ಅಂದ್ರೆ ಅಕಸ್ಮಾತ್ ಪ್ರಾಣ ಹೋಗುವಷ್ಟು ತೊಂದ್ರೆ ಆದರು ಅವರು ಶಿವಾಲಯ ಇದ್ರೆ ಬಚ್ಚಿಟ್ಟು ಕೊಳ್ಳೋಲ್ಲ ,ಹಾಗಂತ ನಮ್ಮ ಕಡೆ ಕೆಲವರ ಬಗ್ಗೆ ತಮಾಷೆ ಮಾಡ್ತಾ ಇರ್ತಾರೆ.ಒಬ್ಬ ಹಿರಿಯ ಹೆಣ್ಣು ಮಗಳು ವೃಕ್ಷ ಪ್ರೇಮಿ,ಆದ್ರೆ ಸಿಕ್ಕಾ ಪಟ್ಟೆ ರಾಮ ಭಕ್ತೆ! ಆಕೆಗೆ ರಾಮ ಬಿಟ್ರೆ ಬೇರೆ ಗಾಡ್ ಇಲ್ಲ,ತನ್ನ ಮನೆ ಮುಂದೆ ಹಿಂದೆ ಇರೋ ಗಿಡಗಳನ್ನು ಪ್ರೀತಿಯಿಂದ ಕಾಣುವ ಆಕೆ ಒಂದು ದಿನ ಗಿಡದ ತುಂಬಾ ಹುವ್ವು ಅರಳಿಸಿಕೊಂಡಿದ್ದ ಗಿಡವನ್ನು ಕತ್ತರಿಸಿ ಹಾಕಿಸುತ್ತ ಇದ್ದರು,ನನಗೆ ತುಂಬಾ ಆಶ್ಚರ್ಯ ಆಯ್ತು.ಯಾಕೆ ಹೀಗ್ ಮಾಡಿದಿರಿ ಅಂತ ಕೇಳಿದರೆ, ಅಯ್ಯೋ ಇದು ಶಿವನಿಗೆ ಪೂಜೆ ಮಾಡೋ ಹುವ್ವು,ಈಗ ಗೊತ್ತಾಯಿತು ಅದಕ್ಕೆ ಕದೆಸಿ ಹಾಕ್ತಾ ಇದ್ದೀನಿ ಅಂತ ಹೇಳಿದ್ದರು. ಅಂತಹುದೇ ಒಂದು ಪ್ರಾಡೆಕ್ಟು,ಆಕೆಗೆ ಕೃಷ್ಣ ಅಂತ ಅಂದ್ರೆ ಎಲ್ಲಿಲ್ಲಿಲ್ಲದ ಪ್ರೀತಿ! ನೋಡೇ ಈ ಕೃಷ್ಣ ಎಲ್ಲರನ್ನು ಆಕರ್ಷಣೆ ಮಾಡ್ತಾನೆ ಕಳ್ಳ! ಅಂತ ದೇವರ ಬಗ್ಗೆ ಮುದ್ದಾಗಿ ಹೇಳಿದರು ಆಕೆ.ಆಗ ನಿಮ್ಮ ಅಭಿಪ್ರಾಯ ತಪ್ಪು ಆಂಟಿ ಅಂತ ಅಂದೇ ,ನೀನೂ ಬಿಡು ಮೊಸರಲ್ಲಿ ಕಲ್ಲು ಹುಡುಕೊಳುಅಂತ ಹೇಳಿ ಚುಚ್ಚಿದರು.ಇರ ಬಹುದು ಆಂಟಿ ಆದರೆ ಸಾಕಷ್ಟು ಹೆಣ್ಣು ಮಕ್ಕಳಿಗೆ ಕೃಷ್ಣ ಆರಾಧ್ಯ ದೈವ ಅಲ್ಲ ಅಂತ ಅಂದೇ. ಅದಕ್ಕೆ ಆಕೆ ಹಾಗಂದ್ರೆ? ಅಂತ ಕೇಳಿದರು.. ಈಗ ನೋಡಿ ಕೃಷ್ಣ ಒಂದು ಹಾಡಿನ ಬಗ್ಗೆ ಹೇಳ್ತೀನಿ ... ಮೆಲ್ಲ ಮೆಲ್ಲನೆ ಬಂದನೆ ಗೋಪಮ್ಮ ಕೇಳೆ ...,ತಕ್ಷಣ ಆಕೆ ಆಹಾ ಎಂತ ಹಾಡು ಅಲ್ವ.. ಅಂತ ಕೇಳಿದರು,ಹಾಡು ಮುಂದೆ ಕೇಳಿದ್ದೀರಾ ಅಂದೇ,ಆಕೆ ಸುಮ್ಮನೆ ಇದ್ದರು,ಮೊಸರು ಮಾರಲು ಹೋದರೆ ನಿನ್ನಯ ಕಂಡ ಹೆಸರೇನೆಂದು ಕೇಳಿದ? ಹಸನಾದ......ಹಸುಮುಖಿಯರನು ಬಸಿರು ಮಾಡಿದ ಕೃಷ್ಣ ! ಅಂತ ಹೇಳಿ ಅವರ ಕಡೆ ನೋಡಿ ,ಹೇಳಿ ಆಂಟಿ ದೇವರ ಬಗ್ಗೆ ಭಕ್ತ ಇಷ್ಟು ಜಗಜ್ಜಾಹೀರವಾಗಿ ಬರೆದರೆ ಹೆಣ್ಣು ಮಕ್ಕಳಿಗೆ ಇಷ್ಟಾ ಆಗುತ್ತಾ? ಅಂತ ಕೇಳಿ.ನನ್ನ ಮಾತು ಆಕೆಗೆ ಇಷ್ಟ ಆಗಲಿಲ್ಲ,ಅದರ ಒಳ ಅರ್ಥ ಬೇರೆ ಇದೆ ಅಂತ ಅಂದ್ರು..ಬೇರೆ ಯಾವುದೇ ಅರ್ಥ ಇರಲಿ ಆದರೆ ಇದು ಮುಖ್ಯ ಅರ್ಥದ ಪಟ್ಟಿಗೆ ಸೇರುತ್ತೆ ತಾನೆ? ಕೃಷ್ಣ ಹಾಡುಗಳನ್ನು ತುಂಬಾ ಹೆಣ್ಣುಮಕ್ಕಳು ಹಾಡೋದೇ ಇಲ್ಲ,,ಅದು ಅವರ ದೃಷ್ಟಿಕೋನ ಇರಬಹುದು,ಆದರೆ ಇದನ್ನು ಒಪ್ಪಿಕೊಳ್ಳ ಬೇಕು ತಾನೆ ಅಂದೇ..! ಆವತ್ತಿನಿಂದ ಆ ಭಕ್ತೆ ನನ್ನೊಂದಿಗೆ ಮಾತಾಡಿಲ್ಲ!!!

No comments:

Post a Comment